ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಜಿ ಡಿಸಿಎಂ, ಪ್ರಖರ ಹಿಂದುತ್ವವಾದಿ ಕೆ.ಎಸ್.ಈಶ್ವರಪ್ಪ (KS Eshwarappa) ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
VIDEO REPORT | ಕಾರ್ಯಕರ್ತರ ಮುಂದೆ ನೋವು ತೋಡಿಕೊಂಡ ಈಶ್ವರಪ್ಪ
READ | ಪುತ್ರ ಕಾಂತೇಶ್ಗೆ ಎಂಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಮಹತ್ವದ ಸಭೆ ಕರೆದ ಈಶ್ವರಪ್ಪ
ರಾಷ್ಟ್ರ ಭಕ್ತರ ಬಳಗದಿಂದ ನಗರದ ಬಂಜಾರ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಹಿತೈಷಿಗಳ ಸಲಹೆಗಳನ್ನು ಸ್ವೀಕರಿಸಿ ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಭಾವನಾತ್ಮಕವಾಗಿಯೇ ಮಾತನಾಡಿದ ಈಶ್ವರಪ್ಪ, ತಮ್ಮ ಮಾತಿನುದ್ದಕ್ಕೂ ಮಾಜಿ ಸಿಎಂ ಯಡಿಯೂರಪ್ಪರನ್ನು ತಿವಿದರು. ಅವರಿಂದ ಅನ್ಯಾಯ ಆಗಿರುವುದಾಗಿ ಆರೋಪಿಸಿದರು.
ಶನಿವಾರ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲಿದೆ. ಒಂದೂವರೆ ತಿಂಗಳು ನೀವೆಲ್ಲ ನನ್ನ ಜೊತೆಗಿರಿ. ನನ್ನ ಬದುಕಿನಲ್ಲಿ ಇಂತಹ ದಿನ ಬರುತ್ತದೆ ಎಂದುಕೊಂಡಿರಲಿಲ್ಲ. ಆದರೆ, ನೊಂದವರ ದನಿಯಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ. ಆದರೆ, ನಾನು ಸತ್ತರೂ ನರೇಂದ್ರ ಮೋದಿ ಪರ ಇರುತ್ತೇನೆ ಎಂದರು.
ಈಶ್ವರಪ್ಪ ಹೇಳಿದ್ದೇನು?
1. ಉದ್ವೇಗದ ತೀರ್ಮಾನವಲ್ಲ
ನಾನು ತೆಗೆದುಕೊಂಡಿರುವುದು ಉದ್ವೇಗದ ತೀರ್ಮಾನವಲ್ಲ. ಹಿಂದುತ್ವಕ್ಕೆ ಅನ್ಯಾಯ ಆಗಬಾರದು. ಒಂದೇ ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು. ಕಾರ್ಯಕರ್ತರ ದನಿಯಾಗುವ ಉದ್ದೇಶದಿಂದ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದರು.
2. ಗೆದ್ದರೆ ಮತ್ತೆ ಪಕ್ಷ ಸೇರ್ಪಡೆ
ಸ್ವತಂತ್ರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದರೆ ಪಕ್ಷದಿಂದ ನೋಟಿಸ್ ಬರಬಹುದು ಹೆಚ್ಚೆಂದರೆ ವಜಾ ಮಾಡಬಹುದು. ಒಂದುವೇಳೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಎರಡೇ ತಿಂಗಳಲ್ಲಿ ಪಕ್ಷ ನನ್ನನ್ನು ವಾಪಸ್ ಕರೆಸಿಕೊಳ್ಳುತ್ತದೆ.
3. ಮಾತು ಮರೆತು ಬಿಟ್ರಾ?
ನನ್ನ ಪುತ್ರ ಕಾಂತೇಶನಿಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಆದರೆ ಈಗ ಅವಕಾಶ ನೀಡುವುದಿಲ್ಲ ಎಂದರೆ ಹೇಗೆ?
4. ಇಬ್ಬರೂ ಪುತ್ರರಿಗೆ ಸ್ಥಾನ
ಯಡಿಯೂರಪ್ಪನವರ ಒಬ್ಬ ಪುತ್ರ ಸಂಸದ, ಮತ್ತೊಬ್ಬ ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ. ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಮೋದಿ ಅವರು ಕುಟುಂಬ ರಾಜಕಾರಣ ವಿರೋಧಿಸಿದ್ದರು. ಈಗ ಬಿಜೆಪಿಯಲ್ಲೂ ಕಾಂಗ್ರೆಸ್ ಸಂಸ್ಜೃತಿ ನುಸುಳಿದೆಯೇ?