Geetha Shivarajkumar | ಶಿವಮೊಗ್ಗಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಂಟ್ರಿ, ಸುಡು ಬಿಸಿಲಿನಲ್ಲೂ ಹ್ಯಾಟ್ರಿಕ್ ಹಿರೋ ರೋಡ್ ಶೋ

Geetha 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಬುಧವಾರ ಶಿವಮೊಗ್ಗಕ್ಕೆ ಆಗಮಮಿಸಿದ್ದು, ಪ್ರಚಾರ ಆರಂಭಿಸಿದ್ದಾರೆ.

READ | ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ? ಆಯೋಗದ ಷರತ್ತುಗಳೇನು? ಎಷ್ಟು ಹಣ ಕೊಂಡೊಯ್ಯಲು ಅವಕಾಶ?

ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಕಾರೆಹಳ್ಳಿ ಬಳಿ ಗೀತಾ ಅವರನ್ನು ಸ್ವಾಗತಿಸಿದರು. ಕೆಂಪೇಗೌಡ ನಗರ, ಬಾರಂದೂರು, ಮೊಸರಳ್ಳಿ, ಮಾರುತಿ ನಗರ, ಶಿವನಿ ಕ್ರಾಸ್, ಸಾದಾತ್ ಕಾಲೋನಿ, ಗಾಂಧಿ ಸರ್ಕಲ್, ಓ.ಎಸ್.ಎಂ ರಸ್ತೆ, ರಂಗಪ್ಪ ಸರ್ಕಲ್, ಸಿ.ಎನ್. ರೋಡ್, ಮಾಧವಚಾರ್ ಸರ್ಕಲ್, ಬಿ.ಎಚ್.ರಸ್ತೆ, ಅಂಡರ್ ಬ್ರಿಡ್ಜ್, ಉಂಬ್ಳೆಬೈಲು ರಸ್ತೆ ಮಾರ್ಗವಾಗಿ ಜನ್ನಾಪುರ, ಸಿದ್ದಾಪುರ, ಬೈಪಾಸ್ ರಸ್ತೆಯವರೆಗೆ ಚುನಾವಣೆ ಪ್ರಯುಕ್ತ ತೆರೆದ ಜೀಪ್ ನಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಹ್ಯಾಟ್ರಿಕ್ ಹಿರೋ ರೋಡ್ ಶೋ

Geetha 5

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ತಮ್ಮ ಪತ್ನಿ ಗೀತಾ ಅವರ ಪರ ಸುಡು ಬಿಸಿಲಿನಲ್ಲೂ ರೋಡ್ ಶೋ ನಡೆಸಿದರು. ಭದ್ರಾವತಿಯಲ್ಲಿ ರೋಡ್ ಶೋ ನಡೆಸುವ ವೇಳೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು. ಕಾರಿನಲ್ಲಿ ಸಾಗುತ್ತಿರುವಾಗ ಅಭಿಮಾನಿಗಳು ಕೈ ಕುಲುಕಿದರು.
ಶಿವಮೊಗ್ಗದ ಎಂಆರ್.ಎಸ್ ಬಳಿ ಪಕ್ಷದ ಕಾರ್ಯಕರ್ತರು ಗೀತಾ ಮತ್ತು ಶಿವರಾಜ್ ಕುಮಾರ್ ಅವರನ್ನು ಸ್ವಾಗತಿಸಿದರು. ತರಹೇವಾರಿ ಹೂಮಾಲೆಗಳನ್ನು ಹಾಕಿದರು. ಅಲ್ಲಿಂದ ಮೆರವಣಿಗೆಯು ಶಿವಮೊಗ್ಗ ನಗರದಲ್ಲಿರುವ ಲಗನಾ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡರು.

error: Content is protected !!