ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಏ.3 ರಂದು ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆ ಗ್ರಾಮದ ಸೈಯದ್ ಸಾದತ್ ದರ್ಗಾ ಸಮೀಪದಲ್ಲಿರುವ ಹಬೀಬುಲ್ಲರವರ ಲಾಡ್ಜ್ ನಲ್ಲಿ ಸುಮಾರು 30-35 ವರ್ಷದ ಮಹಿಳೆಯ ಮೃತ ದೇಹವು ಕೊಲೆಯಾದ ಸ್ಥಿತಿಯಲ್ಲಿ ದೊರಕಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
READ | ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕೆ? ಹೀಗೆ ಮಾಡಿ
ಹರಿತವಾದ ಚೂರಿಯಿಂದ ಚುಚ್ಚಿ ಕೊಲೆ ಮಾಡಿ ಮೃತದೇಹವನ್ನು ರೂಮ್ನಲ್ಲಿ ಬಿಟ್ಟು ಹೋಗಲಾಗಿದೆ. ಈ ಮಹಿಳೆಯ ವಿಳಾಸ, ಹೆಸರು ಪತ್ತೆಯಾಗಿರುವುದಿಲ್ಲ. ಈಕೆಯ ಚಹರೆ ಸುಮಾರು 5.3 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡುಮುಖ ಹೊಂದಿದ್ದು, ಕಿವಿಯಲ್ಲಿ ಕೆಂಪುಹರಳಿನ ಬೆಂಡೋಲೆ, ಎಡಭಾಗದ ಮೂಗಿನಲ್ಲಿ ರಿಂಗ್, ಕತ್ತಿನಲ್ಲಿ ಕರಿಮಣಿ ಸರ ಹಾಗೂ ಕಾಲು ಬೆರಳಿನಲ್ಲಿ ಕಾಲುಂಗರ ಇರುತ್ತದೆ. ಮೃತಳ ಮೈಮೇಲೆ ಗಿಳಿ ಹಸಿರು ಬಣ್ಣದ ಚೂಡಿದಾರ್, ಕೆಂಪು ಬಣ್ಣದ ವೇಲ್ ಧರಿಸಿರುತ್ತಾಳೆ. ಈ ಮಹಿಳೆಯ ವಿಳಾಸ ಮತ್ತು ವಾರಸುದಾರರು ಪತ್ತೆಯಾದಲ್ಲಿ ಮಾಳೂರು ಪೊಲೀಸ್ ಠಾಣೆ ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ, ದೂ.ಸಂ.: 08182-261413/ 9480803300/ 08181- 235142/228310/ 9480803353/ 9480803333/ 9480803340 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳವಾರವೂ ಓಪನ್
SHIMOGA: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಹುಲಿ-ಸಿಂಹ ಧಾಮದಲ್ಲಿನ ಝೂ ಹಾಗೂ ಸಫಾರಿ ವೀಕ್ಷಣೆಯು ಯುಗಾದಿ ಹಬ್ಬದ ಪ್ರಯುಕ್ತ ಏ.9 ರ ಮಂಗಳವಾರವೂ ಸಹ ತೆರೆದಿರುತ್ತದೆ. ಇದರ ಸದುಪಯೋಗವನ್ನು ಪ್ರವಾಸಿಗರು ಪಡೆದುಕೊಳ್ಳಬಹುದಾಗಿರುತ್ತದೆ ಎಂದು ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನ
SHIMOGA: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಅರಣ್ಯ ಉತ್ಪನ್ನಗಳ ಸಂಸ್ಕರಣ ಮತ್ತು ಮೌಲ್ಯವರ್ಧನೆಗಾಗಿ ಬುಡಕಟ್ಟು ಪ್ರದೇಶಗಳಲ್ಲಿ 100 ಅರಣ್ಯ ಉತ್ಪನ್ನ ಘಟಕಗಳನ್ನು (TRIFED) ಸಮನ್ವಯದಲ್ಲಿ ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ ದೂ.ಸಂ.: 08182-276776 ನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಕ್ಕಳಿಗೆ ಹಾಡು ಕಲಿಸುವ ನವೀನ ಕಾರ್ಯಕ್ರಮ
SHIMOGA: ಆಕಾಶವಾಣಿ ಭದ್ರಾವತಿ ಕೇಂದ್ರ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ವಿವಿಧ ಹಾಡನ್ನು ಕಲಿಸಲು ನವೀನ ಕಾರ್ಯಕ್ರಮವನ್ನು ಏ.8ರ ಸೋಮವಾರದಿಂದ ಪ್ರಸಾರ ಮಾಡಲಾಗುತ್ತಿದೆ.
ಪ್ರತಿ ಸೋಮವಾರ ಬೆಳಗ್ಗೆ 7.15 ರಿಂದ 7.30ರವರೆಗೆ 3ನೇ ವಯಸ್ಸಿನಿಂದ 10ನೇ ವಯಸ್ಸಿನ ಮಕ್ಕಳಿಗೆ ಚಿಣ್ಣರ ಗೀತೆಯನ್ನು ಕಲಿಸುವ ವಿನೂತನ ಕಾರ್ಯಕ್ರಮವನ್ನು ಸಿದ್ಧಪಡಿಸಿ ಪ್ರಸಾರ ಪಡಿಸುತ್ತಿದೆ.
“ಹಾಡುತ್ತಾ ನಲಿಯೋಣ” ಸರಣಿಯಲ್ಲಿ ಪ್ರತಿ ವಾರ ಒಂದೊಂದು ಹಾಡನ್ನು ಕಲಿಸುತ್ತಿದ್ದು, ಕಲಿಸಿದ ಹಾಡನ್ನು ಪುಟಾಣಿಗಳು ಹಾವ ಭಾವದೊಂದಿಗೆ ಹಾಡಿ ಮೊಬೈಲ್ನಲ್ಲಿ ಚಿತ್ರೀಕರಿಸಿ ಆಕಾಶವಾಣಿ ಭದ್ರಾವತಿ ವಾಟ್ಸಾಪ್ ಸಂಖ್ಯೆ 9481572600 ಗೆ ಅಥವಾ ‘airbdvt@gmail.com’ ಇಮೈಲ್ ಗೆ ಒಂದು ವಾರದ ಒಳಗೆ ಕಳುಹಿಸಿದರೆ ವೀಡಿಯೋ ಚಿತ್ರೀಕರಣ ಮಾಡಿ ಕಳುಹಿಸಿದ ಪುಟಾಣಿಗಳ ಹಾಡನ್ನು ಭದ್ರಾವತಿ ಆಕಾಶವಾಣಿಯ ಯೂಟ್ಯೂಬ್ ಚಾನಲ್ನಲ್ಲಿ ಅದನ್ನು ಪ್ರಕಟಿಸಿ ಆ ಮಕ್ಕಳ ಪ್ರತಿಭೆಯನ್ನು ಜಗತ್ತಿನಾದ್ಯಂತ ತಿಳಿಸುವ ಪ್ರಯತ್ನ ಮಾಡಲಾಗುವುದು.
ಬೇಸಿಗೆ ರಜೆಯ ಸದುಪಯೋಗಕ್ಕಾಗಿ ಸಿದ್ಧಪಡಿಸಿದ ‘ಹಾಡುತ್ತಾ ನಲಿಯೋಣ’ ಕ್ರಿಯಾತ್ಮಕ ಕಲಿಕಾ ಸರಣಿಯು ಆಕಾಶವಾಣಿ ಭದ್ರಾವತಿಯ ಎಫ್.ಎಂ 103.5 ಹಾಗೂ ಮೀಡಿಯಂ ವೇವ್ಸ್ 675 ಕಿಲೋ ಹಟ್ರ್ಸ್ ಮತ್ತು ‘newsonair’Appನಲ್ಲಿ ಪ್ರಸಾರ ಸಮಯದಲ್ಲಿ ಕೇಳುವುದರೊಂದಿಗೆ ಭದ್ರಾವತಿ ಆಕಾಶವಾಣಿ youtube ಚಾನಲ್ನಲ್ಲಿ ಕೇಳುವಂತೆ ಭದ್ರಾವತಿ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.