Arrest | ಸಿಪ್ಪೆಗೋಟು ಅಡಿಕೆ ಕಳವು ಮಾಡಿದ ಆರೋಪಿ ಅರೆಸ್ಟ್

arrest

 

 

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತಾಲೂಕಿನ ಕುರಕುಚ್ಚಿ‌ ಗ್ರಾಮದ ದೇವದಾಸ್ ಎಂಬುವವರ ಮನೆಯಲ್ಲಿ ಸಿಪ್ಪೆಗೋಟು ಅಡಿಕೆ ಕಳವು ಮಾಡಿದ ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ.
ಶಿಕಾರಿಪುರ ತಾಲೂಕು ಹರಗುವಳ್ಳಿ ಗ್ರಾಮದ ಜಿ.ವೈ.ಹನುಮಂತಪ್ಪ (24) ಬಂಧಿತ ಆರೋಪಿ. ಆತನ ಬಳಿಯಿಂದ ₹80,000‌ ಮೌಲ್ಯದ 3 ಕ್ವಿಂಟಲ್ 95 ಕೆ.ಜಿ. ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಕಳವಾದ ಅಡಿಕೆ ಮತ್ತು ಆರೋಪಿತರ ಪತ್ತೆಗಾಗಿ ಎಸ್.ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಎ.ಜಿ.ಕಾರಿಯಪ್ಪ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ಗಜನಾನನ ವಾಮನ ಸುತಾರ, ಮಾಳೂರು ಸಿಪಿಐ ಕೆ.ಶ್ರೀಧರ್ ಮೇಲ್ವಿಚಾರಣೆಯಲ್ಲಿ ಮಾಳೂರು ಠಾಣೆ ಪಿಎಸ್ಐ ಕುಮಾರ್ ಕೂರಗುಂದ, ಶಿವಾನಂದ ದರೇನವರ್ ನೇತೃತ್ವದಲ್ಲಿ ಸಿಬ್ಬಂದಿ ಸುರಕ್ಷಿತ, ರಾಜಶೇಖರ್ ಶೆಟ್ಟಿಗಾರ್, ಮಂಜುನಾಥ್, ಲೋಕೇಶ್, ಪ್ರದೀಪ್, ಸಂತೋಷ್, ಪುನೀತ್, ಚೇತನ್, ಅಭಿಲಾಷ್ ತನಿಖಾ ತಂಡದಲ್ಲಿದ್ದರು.

Read | ಇವರಿಗೆ ದೇವಸ್ಥಾನಗಳೇ ಟಾರ್ಗೆಟ್, ಟೆಂಪಲ್ ಗಳಲ್ಲಿ ಕಳವು ಮಾಡಿದವರು ಅರೆಸ್ಟ್

 

error: Content is protected !!