ಸುದ್ದಿ ಕಣಜ.ಕಾಂ ಸಾಗರ
SAGAR: ಶರಾವತಿ ಹಿನ್ನೀರು ಪ್ರದೇಶದಲ್ಲಿ ಸರಣಿ ಕಳವುಗಳನ್ನು ಮಾಡಿ ತಲೆ ಮರೆಸಿಕೊಂಡಿದ್ದ ಗ್ಯಾಂಗ್ ನಲ್ಲಿ ಒಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದವರ ಶೋಧಕಾರ್ಯ ನಡೆದಿದೆ.
READ | ಶಿವಮೊಗ್ಗದಲ್ಲಿ ಕೆಎಫ್ಡಿಗೆ ಯುವತಿ ಬಲಿ, ನಾಲ್ಕು ವರ್ಷಗಳ ಬಳಿಕ ಮೊದಲ ಸಾವು
ಎಲ್ಲೆಲ್ಲಿ ಎಷ್ಟು ಕಳವು?
ಡಿಸೆಂಬರ್ 16ರಂದು ಸಸಿಗೊಳ್ಳಿಯ ಶ್ರೀ ನಾರಾಯಣಗುರು ಸಹಕಾರ ಸಂಘದಲ್ಲಿ ಸುಮಾರು ₹1.70 ಲಕ್ಷ ನಗದು, ಡಿಸೆಂಬರ್ 29ರಂದು ಹಾಲೆಮನೆ ಶ್ರೀ ಚಂದ್ರನಾಥ ಸ್ವಾಮಿ ಜೈನ ಬಸದಿಯ ಹುಂಡಿಯಲ್ಲಿದ್ದ ಸುಮಾರು ₹10 ಸಾವಿರ ನಗದು, 20 ಗ್ರಾಂ ಬಂಗಾರ, 1.50 ಕೆಜಿ ಬೆಳ್ಳಿ ವಸ್ತುಗಳನ್ನು ಕಳವು ಮಾಡಲಾಗಿತ್ತು.
ಪೊಲೀಸರ ತಂಡದ ಮಿಂಚಿನ ಕಾರ್ಯಾಚರಣೆ
ಕಾರ್ಗಲ್ ಪೊಲೀಸ್ ಭಾಷೆಯಲ್ಲಿ ಪ್ರಕರಣ ದಾಖಲಾಗಿದ್ದೇ ಪೊಲೀಸರ ತಂಡ ಕಾರ್ಯಾಚರಣೆಗೆ ಮುಂದಾಗಿದೆ. ಜ.4ರಂದು ಮಂಗಳೂರಿನ ಮನೆಯೊಂದರಲ್ಲಿ ಅಡಗಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತನೊಂದಿಗೆ ಇನ್ನೂ ನಾಲ್ಕೈದು ಜನರ ತಂಡ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಸಾಗರ ಡಿವೈಎಸ್.ಪಿ ಗೋಪಾಲಕೃಷ್ಣ ನಾಯಕ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಮಹಾಬಲೇಶ್ವರ ನಾಯ್ಕ, ಕಾರ್ಗಲ್ ಠಾಣೆಯ ಪಿಎಸ್ಐ ಹೊಳಬಸಪ್ಪ ಹೋಳಿ ನೇತೃತ್ವದಲ್ಲಿ ಹಾಲೆಮನೆ ಅಪರಾಧ ವಿಭಾಗದ ಸಿಬ್ಬಂದಿ ಸನಾವುಲ್ಲಾ, ಜಯೇಂದ್ರ, ಮಂಜುನಾಥ್ ನಾಯ್ಕ, ಲೋಕೇಶ್, ಶರತ್ ಕುಮಾರ್, ಪುರುಷೋತ್ತಮ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.