ಸುದ್ದಿ ಕಣಜ.ಕಾಂ
ಭದ್ರಾವತಿ: ಪತ್ನಿಯನ್ನು ಚಿಕಿತ್ಸೆಗೋಸ್ಕರ ಬೆಂಗಳೂರಿಗೆ ಕರೆದುಕೊಂಡು ಹೋಗಿ ವಾಪಸ್ ಬರುವ ಹೊತ್ತಿಗೆ ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, 20 ಸಾವಿರ ನಗದು ದೋಚಿರುವ ಘಟನೆ ಜನ್ನಾಪುರದಲ್ಲಿ ನಡೆದಿದೆ.
ಕೆ.ಸಿ.ರಾಮಚಂದ್ರ ಎಂಬುವವರೇ ಹಣ ಕಳೆದುಕೊಂಡಿರುವ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಸಮಯ ಸಾಧಿಸಿ ಘಟನೆ ಎಸಗಿದ್ದಾರೆ.
ಜನ್ನಾಪುರದ ಕುರುಬರ ಬೀದಿಯಲ್ಲಿ ಮನೆಯಿದ್ದು, ಬೆಂಗಳೂರಿಗೆ ಹೋಗಿ ಬರುವ ಹೊತ್ತಿಗೆ ಮನೆಯ ಕೊಠಡಿಯಲ್ಲಿದ್ದ ಬೀರುವಿನ ಇಂಟರ್ ಲಾಕ್ ಮುರಿದು 20 ಸಾವಿರ ನಗದು ಹಾಗೂ 30 ಗ್ರಾಂ ಚಿನ್ನದ ಬಳೆ, 15 ಸಾವಿರ ಮೌಲ್ಯದ ಚಿನ್ನದ ಸರ, 10 ಗ್ರಾಂ ಉಂಗುರ ದೂಚಿದ್ದಾರೆ. ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.