ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪಾದಾಚಾರಿ ರಸ್ತೆಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬರ ತಲೆಯ ಮೇಲಿಂದ ವಾಹನ ಹತ್ತಿದ್ದ ಪರಿಣಾಮ ಆತನ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ಜಟ್ ಪಟ್ ನಗರದ ನಿವಾಸಿ ನಾಗರಾಜ್(63) ಎಂಬಾತ ಮೃತಪಟ್ಟಿದ್ದಾನೆ. ಕುಡಿದು ಶುಭಮಂಗಳ ಸಮೀಪದ ರಸ್ತೆ ಬದಿ ಮಲಗಿದ್ದಾಗ ವಾಹನವೊಂದು ರಿವರ್ಸ್ ತೆಗೆಯುವಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.