ಸುದ್ದಿಕಣಜ.ಕಾಂ
ಶಿವಮೊಗ್ಗ: ಜ್ಞಾನಪೀಠ ಪುರಸ್ಕೃತರಾದ ನಮ್ಮ ನೆಲೆಯ ರಾಷ್ಟ್ರಕವಿ ಕುವೆಂಪು ಅವರ ಜನುಮದಿನದ ಸಂಭ್ರಮ ಇಂದು. ವಿಶ್ವಮಾನವ ಕಲ್ಪನೆಯನ್ನು ಜಗದಲ್ಲಿ ಸಾರಿದ ಕುವೆಂಪು ಅವರ ನಾಮಾಂಕಿತ ವಿಶ್ವವಿದ್ಯಾಲಯ ನಮ್ಮ ಹಿರಿಮೆಯೇ ಸರಿ. ಆದರೆ, ಇಂತಹ ನಾಮಾಂಕಿತ ಹೊಂದಿರುವ ವಿಶ್ವವಿದ್ಯಾಲಯ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ವಿವಿ ಹಾಕಿಸಿರುವ ವಿನಾಯಕ ಮೂಲ ಮಂತ್ರದಲ್ಲಿಯ ಕೆಲವು ಶಬ್ದಗಳನ್ನೇ ಬದಲಿಸಿದೆ.
ಈಗ ಬರೆಯಲಾಗಿರುವ ಶ್ಲೋಕ ಮತ್ತು ಮೂಲ ಇರುವ ಶ್ಲೋಕ ಎರಡೂ ಒಂದೇ ಅರ್ಥವನ್ನು ನೀಡುತ್ತವೆ. ಆದರೆ, ಮೂಲ ಶ್ಲೋಕವನ್ನು ತಿರುಚುವ ಅಧಿಕಾರ ಯಾರಿಗೂ ಇಲ್ಲ ಎಂಬುವುದು ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರೊಬ್ಬರ ಅಭಿಪ್ರಾಯವಾಗಿದೆ.
ಈಗ ಬರೆದಿರುವುದು: `ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ಅವಿಘ್ನಂ ಕುರುವೇ ದೇವ ಸರ್ವ ಕಾರ್ಯೇಷು ಸರ್ವದಾ’
ಹೀಗಿರಬೇಕಿತ್ತು: `ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ, ನಿರ್ವಿಘ್ನಂ ಕುರುಮೇದೇವ ಸರ್ವಕಾಯೇಶು ಸರ್ವದ’.
ಕೂಡಲೇ ಕುವೆಂಪು ವಿಶ್ವವಿದ್ಯಾಲಯ ಇದರೆಡೆಗೆ ಗಮನ ಹರಿಸಬೇಕು ಎಂಬುವುದು ದೇವಸ್ಥಾನದ ಭಕ್ತಾದಿಗಳು ಆಗ್ರಹಿಸಿದ್ದಾರೆ.