ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕುಡಿಯಲು ಹಣವಿಲ್ಲ ಎಂಬ ಕಾರಣಕ್ಕೆ ದರೋಡೆಗೆ ವಿಫಲ ಯತ್ನ ನಡೆಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಗೆಯಲ್ಲಿ ನಡೀತು ಹಾಡಹಗಲೆ ಮರ್ಡರ್
ಶಿವಮೊಗ್ಗ ಸೈಕಲ್ ಕ್ಲಬ್ನಿಂದ ಸಮೂಹವಾಗಿ 40ಕ್ಕೂ ಅಧಿಕ ಜನ ಸಕ್ರೆಬೈಲಿಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬರುವಾಗ ಬೈಕ್ನಲ್ಲಿ ಬಂದು ದರೋಡೆ ಪ್ರಯತ್ನ ಮಾಡಿದ್ದಾರೆ. ಆದರೆ, ಅಷ್ಟೊತ್ತಿಗೆ ಸೈಕ್ಲಿಂಗ್ಗೆ ಬಂದಿದ್ದ ಇತರರು ಬಂದಿದ್ದು, ತಕ್ಷಣ ದುಷ್ಕರ್ಮಿಗಳು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.
ಪೊಲೀಸ್ ಇಲಾಖೆ ನಡೆಸಲಿದೆ ಪರೀಕ್ಷೆ, ಈ ವೆಬ್ ಸೈನ್ನಲ್ಲಿ ಸಿಗಲಿದೆ ಹಾಲ್ ಟಿಕೆಟ್
ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕ್ಲಬ್ ನಿರ್ದೇಶಕ ಹರೀಶ್ ಎಂಬುವವರು ದೂರು ನೀಡಿದ್ದಾರೆ. ಮಿಂಚಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಮೇಲೆ ಶಿವಮೊಗ್ಗದ ಯಾವುದೇ ಪೊಲೀಸ್ ಠಾಣೆಗಳಲ್ಲಿ ಯಾವುದೇ ರೀತಿಯ ಅಪರಾಧ ಪ್ರಕರಣಗಳು ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಡಿಯೋ ರಿಪೋರ್ಟ್: ಹೇಗಿತ್ತು ಬಸ್ ಪುನರಾರಂಭದ ಮೊದಲ ದಿನ? ಇಲ್ಲಿಯವರೆಗೆ ಯಾವ ಮಾರ್ಗಕ್ಕೆ ಎಷ್ಟು, ಬಸ್ಗಳ ಸಂಚಾರ
ಬಂಧಿತರು: ಆಟೋ ಕಾಂಪ್ಲೆಕ್ಸ್ನ ಹರೀಶ್ ಮತ್ತು ಶಾರೂ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಸಮರ್ಥ ಎಂಬಾತನ ಮೇಲೆ ದರೋಡೆ ಯತ್ನ ಮಾಡಿದ್ದಾರೆ.