ಸುದ್ದಿ ಕಣಜ.ಕಾಂ
ಸಾಗರ/ಶಿವಮೊಗ್ಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಮತ್ತು ಕಳ್ಳತನ ಯತ್ನ ಪ್ರಕರಣಗಳನ್ನು ಪೊಲೀಸರು ಶುಕ್ರವಾರ ಬೇಧಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಕೆಲವೇ ಹೊತ್ತಲ್ಲಿ ಸುಟ್ಟು ಕರಕಲಾದ ಬಸ್
ಶಿವಮೊಗ್ಗದ ಅಣ್ಣಾನಗರ ನಿವಾಸಿ 30 ವರ್ಷದ ತಬ್ರೇಜ್ ಅಲಿಯಾಸ್ ಬಚ್ಚಾ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನಿಂದ 45 ಗ್ರಾಂ ತೂಕದ 1.80 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1 ಕೆಜಿ 600 ಗ್ರಾಂ ತೂಕದ 96 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಗುಡವಿ ಪಕ್ಷಿಧಾಮ ಪುನಃಶ್ಚೇತನಕ್ಕೆ 11 ಸೂತ್ರ, ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?
ಎಲ್ಲೆಲ್ಲಿ ದಾಖಲಾಗಿದ್ದವು ಕೇಸ್: ಸಾಗರ ಗ್ರಾಮಾಂತರ ಠಾಣೆಯಲ್ಲಿ ಇದೇ ವರ್ಷದಲ್ಲಿ ಎರಡು ಮನೆಗಳ್ಳತನ ಪ್ರಯತ್ನ ಪ್ರಕರಣಗಳು ಹಾಗೂ ಹೊಳೆಹೊನ್ನೂರು ಠಾಣೆಯಲ್ಲಿ ಒಂದು ಮನೆಗಳ್ಳತನ ಪ್ರಕರಣ ದಾಖಲಾಗಿತ್ತು.
ತಂಡದಲ್ಲಿ ಯಾರಿದ್ದಾರೆ?: ಸಾಗರ ಡಿವೈಎಸ್ಪಿ ವಿನಾಯಕ ಶೆಟಗೇರಿ ಮಾರ್ಗದರ್ಶನದಲ್ಲಿ ಸಾಗರ ಗ್ರಾಮಾಂತರದ ಸಿಪಿಐ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಕರಣ ಬೇಧಿಸಲಾಗಿದೆ. ತಂಡದಲ್ಲಿ ಸಾಗರ ಗ್ರಾಮಾಂತರ ಠಾಣೆಯ ಪಿಎಸ್ಐ ಭರತ್ ಕುಮಾರ್, ಸುಜಾತ ಮತ್ತು ಸಿಬ್ಬಂದಿ ಫೈರೋಜ್ ಅಹಮದ್, ಅಶೋಕ್, ರವಿಕುಮಾರ್, ಹಜರತ್ ಅಲಿ, ಸಂತೋಷ್ ನಾಯ್ಕ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.