ಸುದ್ದಿ ಕಣಜ.ಕಾಂ
ಬೆಂಗಳೂರು: ಕಳ್ಳತನ ಮಾಡಿ ಪರಾರಿಯಾಗುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ರಸ್ತೆ ಬದಿ ನಿಂತು ಕಳ್ಳತನ ನಡೆಸುತ್ತಿದ್ದ ಇವರನ್ನು ಸ್ಥಳೀಯರ ಸಹಾಯದಿಂದ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ ವ್ಯಕ್ತಿ ಬೆಂಗಳೂರಲ್ಲಿ ಅರೆಸ್ಟ್, ಕಾರಣವೇನು ಗೊತ್ತಾ?
ಸರಗಳ್ಳತನ ಪ್ರಕರಣಳಲ್ಲಿಯ ಹೆಚ್ಚಾಗಿ ಭಾಗಿಯಾಗಿದ್ದ ಇವರಿಂದ ಜನ ಬೇಸತ್ತಿದ್ದರು. ಸಿಸಿ ಟಿವಿಯಲ್ಲಿ ಸೆರೆಸಿಕ್ಕ ಚಿತ್ರಗಳ ಸಹಾಯದಿಂದ ಇವರನ್ನು ಬಂಧಿಸಲು ಅನುಕೂಲವಾಗಿದೆ.
ಶನಿವಾರ ಕೂಡ ಈ ಬಾಲಕರು ಸರಗಳ್ಳತನಕ್ಕೆ ಪ್ರಯತ್ನಿಸಿದ್ದರು. ಅನುಮಾನಸ್ಪದ ವರ್ತನೆ ಕಂಡು ಸ್ಥಳೀಯರೇ ಇವರನ್ನು ಕುಮಾರಸ್ವಾಮಿ ಲೇಔಟ್ ಠಾಣೆಗೆ ಒಪ್ಪಿಸಿದ್ದಾರೆ.