ಸುದ್ದಿ ಕಣಜ.ಕಾಂ
ಬೆಂಗಳೂರು: ಮೂಲತಃ ಶಿವಮೊಗ್ಗದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಕಾರಣಕ್ಕೆ ಈತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಗರಾಜ್ ಶೆಟ್ಟಿ ಬಂಧಿತ ಆರೋಪಿ. ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ಫೈನ್ಯಾನ್ಸ್ ವೊಂದನ್ನು ನಡೆಸುತ್ತಿದ್ದ. ಈತ ಮೃತ ಕಪಾಲಿ ಮೋಹನ್’ಗೆ ಆಪ್ತನಾಗಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಬಾಲಕಿಯ ಮೇಲೆ ನಡೀತು ಸಾಮೂಹಿಕ ಅತ್ಯಾಚಾರ
ವೈಯಾಲಿಕಾವಲ್, ಮಲ್ಲೇಶ್ವರ ಸುತ್ತಮುತ್ತಲಿನ ಉದ್ಯಮಿ ಮತ್ತು ವ್ಯಾಪಾರಿಗಳಿಗೆ ಈತ ಸಾಲ ನೀಡಿದ್ದ. ದಿನದ ಲೆಕ್ಕದಲ್ಲಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಏನೇನು ವಶ: ಬಂಧಿತನಿಂದ 164 ಚೆಕ್, 84 ಪ್ರಾಮಿಸರಿ ನೋಟ್ಸ್, ಆಸ್ತಿ ದಾಖಲೆ ಮತ್ತು 22 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.