ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ತಾಯಿಯ ಆರೈಕೆಗಾಗಿ ಅಲ್ಲಿಯೇ ಇದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ.
ಊಟ ಕೊಡಿಸುವುದಾಗಿ ಹೇಳಿ ಕಾರಿನಲ್ಲಿ ಈಕೆಯನ್ನು ಕರೆದೊಯ್ದು ಅತ್ಯಾಚಾರದಂತಹ ಹೀನ ಕೃತ್ಯ ಎಸಗಲಾಗಿದೆ. ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಯಾವ ಹೋಟೆಲ್ ಕೂಡ ತೆರೆದಿರಲಿಲ್ಲ. ಹೀಗಾಗಿ, ಊಟ ಕೊಡಿಸುವುದಾಗಿ ಬಾಲಕಿಯನ್ನು ಹೊರಗೆ ಕರೆದುಕೊಂಡು ಹೋಗಲಾಗಿದೆ.
ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿರುವ ಮನೋಜ್ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ | ಭದ್ರಾವತಿಯಲ್ಲಿ ಚಿಕಿತ್ಸೆಗೆ ಬಂದಿದ್ದ ಯುವತಿ ಬಟ್ಟೆ ಬಿಚ್ಚುವಂತೆ ಹೇಳಿದ ವೈದ್ಯ, ಮುಂದೇನಾಯ್ತು?
ಆಗಿದ್ದೇನು?: ಬಾಲಕಿಯ ತಾಯಿ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆ ವೇಳೆ, ತಾಯಿಯನ್ನು ಚಿಕಿತ್ಸೆ, ಚೆಕ್ ಅಪ್ ಇತ್ಯಾದಿಗಳಿಗೆ ಕರೆದೊಯ್ಯಲು ಸಹಕರಿಸಿದ್ದಾನೆ. ಹೀಗಾಗಿ, ಸಹಜವಾಗಿಯೇ ಬಾಲಕಿ ಆತನ ಮೇಲೆ ನಂಬಿಕೆ ಇಟ್ಟು ಊಟಕ್ಕೆಂದು ಕರೆದಾಗ ಹೋಗಿದ್ದಾಳೆ. ಅತ್ಯಾಚಾರ ಸಂತ್ರಸ್ತೆಯನ್ನು ಸಖಿ ಕೇಂದ್ರದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.