ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಘಟನೆ ಇನ್ನೂ ಮರೆ ಮಾಚುವ ಮುನ್ನವೇ ಶಿವಮೊಗ್ಗ ಜನತೆ ಬೆಚ್ಚಿ ಬೀಳುವ ಮತ್ತೊಂದು ಘಟನೆ ಶನಿವಾರ ತಡ ರಾತ್ರಿ ಸಂಭವಿಸಿದೆ.
ಗಾಂಧಿ ಬಜಾರ್ ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಮಳಿಗೆ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆ ಅಕ್ಕ ಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದೆ.
ಘಟನೆ ನಡೆದಿದ್ದೆಲ್ಲಿ ಎಲ್ಲಿ | ಕನ್ಯಕಾ ಪರಮೇಶ್ವರಿ ದೇವಸ್ಥಾನದ ಎದುರುಗಡೆ ಇರುವ ಮಳಿಗೆಯಲ್ಲಿ ಭೀಕರ ದುರಂತ ನಡೆದಿದೆ. ಅವಘಡಕ್ಕೆ ಸುಟ್ಟು ಕರಕಲಾಗಿರುವ ಅಂಗಡಿಯನ್ನು ಕಾಸ್ಮೆಟಿಕ್ಸ್ ಹಾಗೂ ಫ್ಯಾನ್ಸಿ ಅಂಗಡಿ ಎಂದು ಹೇಳಲಾಗಿದೆ.
ಕಾರಣವೇನು | ಶಾರ್ಟ್ ಸಕ್ರ್ಯೂಟ್ ನಿಂದ ಅವಘಡ ಸಂಭವಿಸಿರಬಹುದು ಎನ್ನಲಾಗುತ್ತಿದೆ. ಆದರೆ, ಏಕಾಏಕಿ ಬೆಂಕಿ ತಗುಲಲು ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೀಡಾಗಿವೆ ಎನ್ನಲಾಗಿದೆ.
ಬೆಂಕಿ ಹೊತ್ತಿ ಉರಿಯುತ್ತಿದ್ದಂತೆಯೇ ಸ್ಥಳೀಯರು ಗಾಬರಿಗೊಂಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅವರು ಬಂದು ಬೆಂಕಿ ಆರಿಸುವ ಪ್ರಯತ್ನದಲ್ಲಿದ್ದಾರೆ.