ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣ್ಣಿಮೆಯ ಚಂದಿರ ಮಲೆನಾಡಿನ ಮೋಡಗಳ ಮಧ್ಯೆ ನುಸುಳಿಕೊಂಡು ಕತ್ತಲು ಬೆಳಕಿನಾಟ ಆಡುತ್ತಿದ್ದ ದೃಶ್ಯ ಕವಿ ಮನಸುಗಳಿಗೆ ಹತ್ತಿರವಾಯಿತು.
ಶನಿವಾರ ಸಂಜೆ ಬಾನಂಗಳದಲ್ಲಿ ಚಂದಿರನ ಸೊಬಗು ನೋಡುವುದೇ ಒಂದು ಸೊಗಸು ಮತ್ತು ನಯನ ಮನೋಹರವಾಗಿತ್ತು.
ಭಾರತ ಹುಣ್ಣಿಮೆ | ಹಿಂದೂ ಧರ್ಮ ಶಾಸ್ತ್ರಗಳ ಪ್ರಕಾರ ಹುಣ್ಣಿಮೆ ತಿಥಿಯನ್ನು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ. ಪ್ರತಿ ತಿಂಗಳ ಶುಕ್ಲ ಪಕ್ಷದ ಅಂತಿಮ ತಿಥಿ ಹುಣ್ಣಿಮೆಯಾಗಿರುತ್ತದೆ. ಈ ವರ್ಷದ ಮಾಘ (ಭಾರತ) ಪೌರ್ಣಿಮೆ ಶನಿವಾರ ಬಂದಿತ್ತು.
ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ, ದಾನ ಮಾಡುವ ಪ್ರತೀತಿಯೂ ಇದೆ. ಇದರಿಂದ, ಮೋಕ್ಷ ಪ್ರಾಪ್ತಿ ಆಗುತ್ತದೆಂದು ಧರ್ಮಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.