ಸುದ್ದಿ ಕಣಜ.ಕಾಂ
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಭೀತಿ ಶುರುವಾಗಿದೆ. ವಿವಿಧ ಜಿಲ್ಲೆಗಳಲ್ಲಿ ದಕ್ಷಿಣ ಆಫ್ರಿಕಾ ಕೊರೊನಾ ರೂಪಾಂತರ ವೈರಸ್ ಕಂಡುಬರುತ್ತಿದೆ. ಹೀಗಾಗಿ, ತಾಂತ್ರಿಕ ಸಲಹಾ ಸಮಿತಿ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆ ನೂತನ ಮಾರ್ಗಸೂಚಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಅಂತರ ರಾಜ್ಯ ಪ್ರಯಾಣ, ಟೆಸ್ಟ್ ಪಾಸಿಟಿವಿಟಿ ಪ್ರಮಾಣ ಹಾಗೂ ಸೋಂಕು ಹರಡುವ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಜಿಲ್ಲೆಗಳಲ್ಲಿ ದೈನಂದಿನ ಪರೀಕ್ಷಾ ಪ್ರಮಾಣವನ್ನು ಪರಿಷ್ಕರಿಸಲಾಗಿದೆ. ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 40,000, ಬೆಳಗಾವಿ, ದಕ್ಷಿಣ ಕನ್ನಡ ತಲಾ 3000, ಮೈಸೂರು 5000, ಉಡುಪಿ, ವಿಜಯಪುರ ತಲಾ 2000, ಕೊಡಗು 1000, ತುಮಕೂರು 3500 ಪರೀಕ್ಷೆಗಳು ಹಾಗೂ ಉಳಿದ ಜಿಲ್ಲೆಗಳಲ್ಲಿ ಈಗಾಗಲೇ ನೀಡಿರುವ ಗುರಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬಳ್ಳಾರಿ, ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಬಾಗಲಕೋಟೆ, ಬೆಳಗಾವಿ, ವಿಜಯಪುರ, ದಕ್ಷಿಣ ಕನ್ನಡ, ತುಮಕೂರು, ಬೀದರ್, ಕಲಬುರಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೋವಿಡ್ 19 ದೈನಂದಿನ ಪರೀಕ್ಷಾ ಗುರಿಯನ್ನು ತಲುಪಲು ಪೂರ್ಣ ಪ್ರಮಾಣದಲ್ಲಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಜಿಸಬೇಖು. ನಿಗದಿತ ಗುರಿಯಂತೆ ದಾವಣಗೆರೆ, ಬಳ್ಳಾರಿ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡದಲ್ಲಿ ಆರ್.ಟಿ-ಪಿಸಿಆರ್ ಪರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸುವುದು. ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ಕಡಿಮೆಗೊಳಿಸುವಂತೆ ಸೂಚನೆ ನೀಡಲಾಗಿದೆ.
ಆರು ಕಡೆ ಸೋಂಕಿತರ ಪತ್ತೆ ಕಾರ್ಯ ಚುರುಕು | ಸೋಂಕಿತರ ಪತ್ತೆ ಹಚ್ಚುವ ಕಾರ್ಯವನ್ನು ದಕ್ಷಿಣ ಕನ್ನಡ, ಬೀದರ್, ಬೆಂಗಳೂರುನಗರ, ಗ್ರಾಮಾಂತರ, ಕಲಬುರಗಿ, ಉಡುಪಿಯಲ್ಲಿ ಚುರುಕುಗೊಳಿಸಬೇಕು.
ಕೇರಳಾ, ಮಹಾರಾಷ್ಟ್ರದಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯ | ಕೇರಳಾ, ಮಹಾರಾಷ್ಟ್ರದಿಂದ ಬರುವವರಿಗೆ ಆರ್.ಟಿ. ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಬೇಕು. ಈ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು. ಗಡಿಪ್ರದೇಶದಲ್ಲಿ ತೀವ್ರ ಕ್ರಮ ಕೈಗೊಳ್ಳಬೇಕು.
ಹೊಸ ಮಾರ್ಗಸೂಚಿ | ||
ಸಮಾರಂಭ | ತೆರೆದ ಪ್ರದೇಶ | ಸಭಾಂಗಣ ಹಾಲ್ ಇತ್ಯಾದಿ |
ಸಾಮಾಜಿಕ ಆಚರಣೆ | ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 3.25 ಚದರ ಮೀಟರ್ಗೆ ಒಬ್ಬ ವ್ಯಕ್ತಿಯಂತೆ ಸಾಮಾಜಿಕ ಅಂತರ ಪಾಲನೆ |
|
ರಾಜಕೀಯ ಆಚರಣೆ, ಸಮಾರಂಭ |
500 ಜನರು ತೆರೆದ ಪ್ರದೇಶಗಳಲ್ಲಿ ಸೇರಬಹುದು. |
|
ಮದುವೆ | 500 ಜನ | 200 ಜನ |
ಜನ್ಮದಿನ, ಇತರೆ ಆಚರಣೆ | 100 ಜನ | 50 ಜನ |
ನಿಧನ, ಶವಸಂಸ್ಕಾರ | 100 ಜನ | 50 ಜನ |
ಧಾರ್ಮಿಕ ಆಚರಣೆ, ಸಮಾರಂಭ | 500 ಜನ | ಮಾಡುವಂತಿಲ್ಲ |