ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಕೊರೊನಾ ಕೇಕೆ ಮುಂದುವರಿದಿದೆ. ಸೋಮವಾರವೊಂದೇ ದಿನ 93 ಜನರಿಗೆ ಸೋಂಕು ತಗಲಿದ್ದು, ಜನರಲ್ಲಿ ಭೀತಿ ಸೃಷ್ಟಿಯಾಗಿದೆ.
ಜಿಲ್ಲೆಯಲ್ಲಿ ಹತ್ತು ವಿದ್ಯಾರ್ಥಿಗಳು ಹಾಗೂ ಒಬ್ಬರು ಸಿಬ್ಬಂದಿಗೆ ಸೋಂಕು ತಗಲಿದೆ. ಒಟ್ಟು 219 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಂದು ಸಾವು ಸಂಭವಿಸಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 897ಕ್ಕೆ ತಲುಪಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 70 ಜನರನ್ನು ಬಿಡುಗಡೆಗೊಳಿಸಲಾಗಿದೆ. ಕೊರೊನಾ ಲಕ್ಷಣಗಳನ್ನು ಹೊಂದಿರುವ 2,951 ಜನರ ಮಾದರಿ ಸಂಗ್ರಹಿಸಿದ್ದು, 2,071 ವರದಿಗಳು ನೆಗೆಟಿವ್ ಬಂದಿವೆ.
ಹೋಮ್ ಐಸೋಲೇಷನ್ ನಲ್ಲಿ 558 ಜನ | ಕೋವಿಡ್ ವಾರ್ಡ್ನಲ್ಲಿ 223, ಖಾಸಗಿ ಆಸ್ಪತ್ರೆ 46, ಹೋಮ್ ಐಸೋಲೇಷನ್ 558, ಟ್ರಿಯೇಜ್ 52 ಸೋಂಕಿತರಿದ್ದಾರೆ.
ತಾಲೂಕುವಾರು ಪ್ರಕರಣ | ಶಿವಮೊಗ್ಗ 47, ಭದ್ರಾವತಿ 93, ಶಿಕಾರಿಪುರ 9, ತೀರ್ಥಹಳ್ಳಿ 2, ಸೊರಬ 16, ಸಾಗರ 22, ಹೊಸನಗರ 24, ಹೊರ ಜಿಲ್ಲೆಯ 6.