ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ರಂಜಾನ್ ಆಚರಣೆ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ಎಸ್.ವಟಾರೆ ಅವರು ಮನವಿ ಮಾಡಿದ್ದಾರೆ.
ಇಲ್ಲಿದೆ ಮಾರ್ಗಸೂಚಿ
- ಕಂಟೈನ್ಮೆಂಟ್ ಜೋನ್ ನಲ್ಲಿರು ಮಸೀದಿ ಹಾಗೂ ಇತರ ಪ್ರಾರ್ಥನಾ ಮಂದಿರಗಳನ್ನು ಸಾರ್ವಜನಿಕರಿಗೆ ತೆರೆಯಬಾರದು.
- 60 ವರ್ಷ ಮೇಲ್ಪಟ್ಟವರು, ತೀವ್ರ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿರಬೇಕು.
- ಗುಂಪು ಸೇರಬಾರದು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.
- ಸಾಮಾಜಿಕ ಅಂತಕ ಕಾಯ್ದುಕೊಳ್ಳಲು ಮಸೀದಿಯಲ್ಲಿ ಬಣ್ಣದಿಂದ ಗುರುತು ಮಾಡಬೇಕು. ಅಗತ್ಯವಿದ್ದರೆ ಪಾಳಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು.
- ಆಜಾನ್ ಆರಂಭದ 5 ನಿಮಿಷ ಮೊದಲು ಮಸೀದಿಯನ್ನು ತೆರೆಯಬೇಕು. ಕಡ್ಡಾಯ ನಮಾಜ್ ಮುಗಿದ ತಕ್ಷಣ ಮಸೀದಿಯನ್ನು ಮುಚ್ಚಬೇಕು.
- ಪ್ರಾರ್ಥನೆಗೆ ಅಗತ್ಯವಿರುವ ಮ್ಯಾಟ್, ಟೊಪ್ಪಿ ಇತ್ಯಾದಿಗಳನ್ನು ಮನೆಯಿಂದಲೇ ತರಬೇಕು.
- ಇಫ್ತಾರ್ ಕೂಟವನ್ನು ಮಸೀದಿಯಲ್ಲಿ ಆಯೋಜಿಸದೆ ಮನೆಯಲ್ಲಿಯೇ ಉಪವಾಸ ತೊರೆದು ಕೇವಲ ಪ್ರಾರ್ಥನೆಗಾಗಿ ಮಾತ್ರ ಮಸೀದಿಗೆ ಬರಬೇಕು.
- ಪ್ರತಿ ಪ್ರಾರ್ಥನೆ ಬಳಿಕ ಮಸೀದಿಯನ್ನು ಸ್ವಚ್ಛಗೊಳಿಸಿ ಡಿಸ್ ಇನ್ಫೆಕ್ಷನ್ ಮಾಡಬೇಕು.
- ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತು ಮಸೀದಿಯಲ್ಲಿ ಫಲಕಗಳನ್ನು ಅಳವಡಿಸಬೇಕು.
- ಪ್ರತಿ ಮಸೀದಿಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯನ್ನು ಖಾತ್ರಿಪಡಿಸಲು ಪಾಲನಾ ಸಮಿತಿಗಳನ್ನು ರಚಿಸಬೇಕು.
https://www.suddikanaja.com/2021/04/02/covid-positive-cases-raise-in-shivamogga/