ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಕೊರೊನಾ ಸ್ಫೋಟವಾಗಿದೆ. ಕಳೆದ ಎರಡು ದಿನಗಳಿಂದ ಭದ್ರಾವತಿಯಲ್ಲಿ ಕೊರೊನಾ ರೌದ್ರಾವತಾರ ಇಳಿಕೆಯಾಗಿತ್ತು. ಆದರೆ, ಶುಕ್ರವಾರ ಶಿವಮೊಗ್ಗ, ಭದ್ರಾವತಿಯಲ್ಲಿ ಕ್ರಮವಾಗಿ 79 ಮತ್ತು 58 ಪ್ರಕರಣಗಳು ಪತ್ತೆಯಾಗಿವೆ.
ಶಿವಮೊಗ್ಗ ನಗರದಲ್ಲಿ ಒಂದು ಸಾವು ಸಂಭವಿಸಿದೆ. ಮೃತರು 69 ವರ್ಷದವರಾಗಿದ್ದು, ಅಸ್ವಸ್ಥರಾಗಿದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
178 ಜನರಿಗೆ ಸೋಂಕು | ಶುಕ್ರವಾರ ಐದು ವಿದ್ಯಾರ್ಥಿಗಳು, ಐದು ಸಿಬ್ಬಂದಿ ಸೇರಿ ಒಟ್ಟು 178 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 180 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ಅವರನ್ನಜ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಸಕ್ರಿಯ ಪ್ರಕರಣ ಏರಿಕೆ | ಜಿಲ್ಲೆಯಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 1,305ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ 215 ಜನರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಖಾಸಗಿ ಆಸ್ಪತ್ರೆ 142, ಹೋಮ್ ಐಸೋಲೇಷನ್ 907 ಮತ್ತು ಟ್ರಿಯೇಜ್ ನಲ್ಲಿ 41 ಜನರಿದ್ದಾರೆ. ಸರ್ಕಾರದ ನಿರ್ದೇಶನದಂತೆ, ಪರೀಕ್ಷೆ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಇಂದು 3,121 ಜನರ ಮಾದರಿ ಸಂಗ್ರಹಿಸಲಾಗಿದೆ. 2,246 ವರದಿಗಳು ನೆಗೆಟಿವ್ ಬಂದಿವೆ.
ತಾಲೂಕುವಾರು ವರದಿ | ಶಿಕಾರಿಪುರ 3, ತೀರ್ಥಹಳ್ಳಿ 14, ಸೊರಬ 2, ಹೊಸನಗರ 14, ಸಾಗರ 3, ಹೊರ ಜಿಲ್ಲೆಯ 5.
https://www.suddikanaja.com/2021/01/08/man-dead-due-to-covid/