ಸುದ್ದಿ ಕಣಜ.ಕಾಂ
ಭದ್ರಾವತಿ: ಇಲ್ಲಿನ sಜೈಭೀಮ್ ನಗರದ ಮನೆಯ ಹತ್ತಿರ ನಿಂತಿದ್ದಾಗ ಸುನೀಲ್ನ ಕೊಲೆ ಮಾಡಿ ಶ್ರೀಕಂಠನ ಮೇಲೆ ಹಲ್ಲೆ ಮಾಡಿರುವ ಐವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
READ | ಭದ್ರಾವತಿಯಲ್ಲಿ ಲಾಕ್ಡೌನ್ ಏರಿಯಾದಲ್ಲಿ ಬರಬೇಡ ಎಂದಿದ್ದಕ್ಕೆ ನಡೀತು ಕೊಲೆ
ಭದ್ರಾವತಿಯ ಅನ್ವರ್ ಕಾಲೊನಿಯ ಸಾಬೀತ್ (20), ಶಿವಮೊಗ್ಗದ ಆರ್.ಎಂ.ಎಲ್ ನಗರದ ಇದಾಯತ್ (20), ಮಹಮದ್ ಜುನೇದ್ (20), ಬುದ್ಧನಗರದ ನಿಶಾದ್ ಪಾಶಾ (21), ತತ್ರೇಜ್ ಪಾಶಾ (21) ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ ಕೃತ್ಯಕ್ಕೆ ಬಳಸಿದ 2 ಬೈಕ್ ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ಹಳೇ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.