ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಪ್ರಮುಖ ವೃತ್ತಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಖಾಕಿ ಸರ್ಪಗಾವಲು ಇದೆ. ಎಲ್ಲ ಕಡೆ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ. ಹೊರಗೆ ಬಂದಿರುವುದಕ್ಕೆ ಸರಿಯಾದ ಸಕಾರಣ ನೀಡದ ದ್ವಿಚಕ್ರ ವಾಹನ, ಕಾರು ಎಲ್ಲವನ್ನೂ ಸೀಜ್ ಮಾಡಲಾಗುತ್ತಿದೆ.
VIDEO REPORT
ಅಗತ್ಯ ವಸ್ತುಗಳು ಅಬಾಧಿತವಾಗಿವೆ. ಟೆಲಿಕಾಂ, ವಿದ್ಯುತ್, ಪೋಸ್ಟಲ್, ವೈದ್ಯಕೀಯ, ಮಾಧ್ಯಮ, ಆನ್ ಲೈನ್ ಫುಡ್ ಡೆಲಿವರಿ ಹೀಗೆ ಅಗತ್ಯ ವಸ್ತುಗಳ ಪಟ್ಟಿಯಲ್ಲಿರುವವರಿಗೆ ಗುರುತಿನ ಚೀಟಿ ತೋರಿಸಿದರೆ ಮಾತ್ರ ಓಡಾಡಲು ಅವಕಾಶ ನೀಡಲಾಗುತ್ತಿದೆ.
ಬೆಳಗ್ಗೆಯೇ ಪ್ರಮುಖ ರಸ್ತೆಗಳನ್ನು ಬ್ಯಾರಿಕೆಡ್ ಹಾಕಿ ಬಂದ್ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು ಸಹ ನಿರಂತರ ಸಂಚರಿಸುತ್ತಿದ್ದಾರೆ. ಆಟೋಗಳ ಸಂಚಾರ ಕೂಡ ಇಲ್ಲ.
ಎಲ್ಲೆಲ್ಲಿ ಪೊಲೀಸ್ ಭದ್ರತೆ | ಲಕ್ಷ್ಮೀಟಾಕಿಸ್, ಉಷಾ ನರ್ಸಿಂಗ್ ಹೋಂ, ವಿನೋಬ ನಗರ ಪೊಲೀಸ್ ಚೌಕಿ, ಆಲ್ಕೋಳ ವೃತ್ತ, ಸರ್ಕ್ಯೂಟ್ ಹೌಸ್, ಜೈಲು ವೃತ್ತ, ಮಹಾವೀರ ವೃತ್ತ, ಕೋರ್ಟ್ ವೃತ್ತ, ಗೋಪಿ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್, ಅಶೋಕ ವೃತ್ತ, ಸಾಗರ ರಸ್ತೆ ಹೀಗೆ ಎಲ್ಲ ಕಡೆ ಖಾಕಿ ಪಡೆ ಇದೆ.
https://www.suddikanaja.com/2021/05/07/covid-new-guidelines/