ಸುದ್ದಿ ಕಣಜ.ಕಾಂ
ಭದ್ರಾವತಿ: ಪೇಪರ್ ಟೌನ್ ಪೊಲೀಸರು ಮಂಗಳವಾರ ಮುಂಜಾನೆ ಜಾವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
https://www.suddikanaja.com/2021/06/20/3-accused-arrest-in-theft-case-at-bhadravathi/
ಕಾರೇಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಾಹನಗಳ ಪರಿಶೀಲನೆ ವೇಳೆ ಓಮ್ನಿ ವ್ಯಾನ್ ನಲ್ಲಿ ಬರೋಬ್ಬರಿ 5.83 ಲಕ್ಷ ರೂಪಾಯಿ ಮೌಲ್ಯದ 48 ಕೆಜಿ 656 ಗ್ರಾಂ ಗಾಂಜಾ ಲಭಿಸಿದೆ. ಪ್ರಕರಣ ಸಂಬಂಧ ವ್ಯಾನ್ ಚಾಲಕನನ್ನು ಬಂಧಿಸಲಾಗಿದೆ.
ಸಂಕ್ಲಿಪುರ ಗ್ರಾಮದ ಮುರುಗ(32) ಬಂಧಿತ ಆರೋಪಿ. ಓಮ್ನಿ ವ್ಯಾನಿನಲ್ಲಿ 48 ಕೆಜಿ 656 ಗ್ರಾಂ ತೂಕದ ಒಣ ಗಾಂಜಾ, 1 ಮೊಬೈಲ್, ಅರ್ಧ ಕತ್ತರಿಸಿದ ಪೆಟ್ರೋಲ್ ಟ್ಯಾಂಕ್ ಹಾಗೂ ಕೃತ್ಯಕ್ಕೆ ಬಳಸಿದ ಓಮ್ನಿ ವಾಹನವನ್ನು ಸೀಜ್ ಮಾಡಲಾಗಿದೆ.
ಪೊಲೀಸರ ಕಾರ್ಯಾಚರಣೆ ವೀಕ್ಷಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ (VIDEO REPORT)
ಎಲ್ಲೆಲ್ಲಿ ಹುದುಗಿಡಲಾಗಿತ್ತು ಗಾಂಜಾ | ಓಮ್ನಿ ವ್ಯಾನಿನ ಫ್ಯೂಯಲ್ ಟ್ಯಾಂಕ್, ಹಿಂಭಾಗದ ಡಿಕ್ಕಿಯ ಡೋರ್, ಬಂಪರ್ ಒಳ ಭಾಗ, ಸ್ಲೈಡಿಂಗ್ ಡೋರ್, ವಾಹನದ ಚಾರ್ಸಿಯಲ್ಲಿ ಗಾಂಜಾ ಹುದುಗಿಟ್ಟು ಸಾಗಿಸಲಾಗುತಿತ್ತು.
ಈ ಬಗ್ಗೆ ಪೊಲೀಸರಿಗೆ ಸೋಮವಾರ ರಾತ್ರಿಯೇ ಪಕ್ಕಾ ಮಾಹಿತಿ ಲಭಿಸಿದೆ. ತಕ್ಷಣ ಜಾಗೃತರಾದ ಪೇಪರ್ ಟೌನ್ ಪೊಲೀಸರು ಕಾರ್ಯಗತಗೊಂಡಿದ್ದಾರೆ. ಮಂಗಳವಾರ ಬೆಳ್ಳಂ ಬೆಳಗ್ಗೆ ಕಾರೇಹಳ್ಳಿ ಚೆಕ್ ಪೋಸ್ಟ್ ನಲ್ಲಿ ಮುಕ್ಕಾಂ ಹೂಡಿದ್ದು, ವಾಹನ ಪರಿಶೀಲನೆ ಬಿಗಿಗೊಳಿಸಿದ್ದಾರೆ. ಆಗ ಓಮ್ನಿ ವ್ಯಾನ್ ಪರಿಶೀಲಿಸಿದಾಗ ಭಾರಿ ಪ್ರಮಾಣದ ಗಾಂಜಾ ಲಭಿಸಿದೆ.
ಎಲ್ಲಿಗೆ ಸಾಗಿಸಲಾಗುತಿತ್ತು | ಲಭ್ಯ ಮಾಹಿತಿ ಪ್ರಕಾರ, ತರೀಕೆರೆಯಿಂದ ಭದ್ರಾವತಿಯ ಕಡೆಗೆ ಗಾಂಜಾ ತುಂಬಿದ್ದ ಓಮ್ನಿ ಬರುತಿತ್ತು. ಆಗ ಭದ್ರಾವತಿ ಎಎಸ್ಪಿ ಸಾಹಿಲ್ ಬಾಗಲಾ, ಶಿವಮೊಗ್ಗ ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ, ಕುಂಸಿ ಪಿಐ ಅಭಯ್ ಪ್ರಕಾಶ್, ಪೇಪರ್ ಟೌನ್ ಪಿಎಸ್ಐ, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದದ ಗಾಂಜಾ ಎಲ್ಲಿಗೆ ಒಯ್ಯಲಾಗುತಿತ್ತು ಎಂಬ ವಿಚಾರ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
https://www.suddikanaja.com/2021/02/19/arrest-in-bhadravati/