ಸುದ್ದಿ ಕಣಜ.ಕಾಂ | SHIVAMOGGA | CRIME
ಶಿವಮೊಗ್ಗ: ಬಾಪೂಜಿನಗರ ನಿವಾಸಿ ರಾಹಿಲ್(22) ಎಂಬಾತನ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಟ್ಯಾಂಕ್ ಮೊಹಲ್ಲಾದ ಅಜ್ಗರ್ ಖಾನ್(21), ರಾಗಿಗುಡ್ಡದ ಅತಿಕ್ ಪಾಶಾ(36) ಎಂಬುವವರನ್ನು ಬಂಧಿಸಲಾಗಿದೆ.
https://www.suddikanaja.com/2021/01/28/four-person-arrested-in-shivamogga/
ಹೇಗೆ ನಡೆದಿತ್ತು ಕೊಲೆ?
ರಾಹಿಲ್ ಬೈಕಿಗೆ ಸಿದ್ದಿಕ್ ಅವರ ಮಗನ ಸೈಕಲ್ ಅಡ್ಡ ಬಂದ ವಿಚಾರವಾಗಿ ಸಣ್ಣ ಗಲಾಟೆಯಾಗಿದೆ. ಈ ವಿಚಾರವಾಗಿ ಸಿದ್ದಿಕ್ ಮಗ ಅಜ್ಗರ್ ಖಾನ್ ಮತ್ತು ಚಿಕ್ಕಪ್ಪ ಅತಿಕ್ ಪಾಷಾ ಎಂಬುವವರು ರಾಹಿಲ್ ನ ಮೇಲೆ ದ್ವೇಷ ಬೆಳೆಸಿಕೊಂಡು ಸೋಮವಾರ ಬೆಳಗ್ಗೆ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ
ಟ್ಯಾಂಕ್ ಮೊಹಲ್ಲಾದ ಎಚ್.ಕೆ.ಜಿ.ಎನ್ ಕ್ಯಾಂಟೀನ್ ಹತ್ತಿರ ಬರುತ್ತಿದ್ದ ರಾಹೀಲ್ ಎಂಬಾತನನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು, ಅಜ್ಗರ್ ಖಾನ್ ತನ್ನ ಬಳಿ ಇದ್ದ ಚಾಕುವಿನಿಂದ ರಾಹಿಲ್ ಎಡ ಸೊಂಟದ ಕೆಳ ಭಾಗ ಚುಚ್ಚಿ ಕೊಲೆ ಮಾಡಿದ್ದಾನೆ.
ಮೃತನ ಚಿಕ್ಕಪ್ಪ ಮಹಬೂಬ್ ಪಾಶಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪಿ.ಐ ಕೋಟೆ ಪೊಲೀಸ್ ಠಾಣೆ, ಪಿಎಸ್ಐ ಹಾಗೂ ಸಿಬ್ಬಂದಿಗಳ ತಂಡವು ಆರೋಪಿಗಳನ್ನು ಬಂಧಿಸಿದ್ದಾರೆ.
https://www.suddikanaja.com/2020/11/12/rowdy-murder-case-two-person-arrested-in-shivamogga/