ಸುದ್ದಿ ಕಣಜ.ಕಾಂ | BHADRAVATHI | CRIME
ಶಿವಮೊಗ್ಗ: ತವೇರಾ ಕಾರಿನಲ್ಲಿ ಚಿತ್ರದುರ್ಗ, ಚನ್ನಗಿರಿ ಮಾರ್ಗವಾಗಿ ಭದ್ರಾವತಿ ಕಡೆಗೆ ಅಕ್ರಮವಾಗಿ ಸಾಗಿಸುತಿದ್ದ ಭಾರಿ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
https://www.suddikanaja.com/2021/07/16/ganja-sale-accused-arrested/
ವಾಹನದ ಚಾಲಕ ತರೀಕೆರೆ ತಾಲೂಕಿನ ಲಕ್ಕವಳ್ಳಿಯ ಕರಕುಚ್ಚಿ ಗ್ರಾಮದ ನಿವಾಸಿ ಗೋಪಿನಾಥ್ (27), ಭದ್ರಾವತಿ ತಾಲೂಕಿನ ದೊಡ್ಡಗೊಪ್ಪೇನ ಹಳ್ಳಿಯ ಭರತ್ (22), ಜನ್ನಾಪುರದ ವೇಲೂರುಶೆಡ್ ನಿವಾಸಿ ಸಾಗರ್ (25) ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಅಂದಾಜು 2,30,000 ರೂಪಾಯಿ ಮೌಲ್ಯ ಬೆಲೆ ಬಾಳುವ ಒಟ್ಟು 23 ಕೆ.ಜಿ 216 ಗ್ರಾಂ ಒಣ ಗಾಂಜಾ, ಕೃತ್ಯಕ್ಕೆ ಬಳಸಿದ ಕಾರು, 3 ಮೊಬೈಲ್ ಹ್ಯಾಂಡ್ ಸೆಟ್ ಗಳು ಮತ್ತು 540 ರೂಪಾಯಿ ನಗದು ಹಣ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಬಳಿ ಸಿಕ್ಕಿದ ಗಾಂಜಾ ಎಷ್ಟು?
ಮಾದಕ ವಸ್ತು ಗಾಂಜಾವನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಭದ್ರಾವತಿ ಉಪ ವಿಭಾಗ ಎ.ಎಸ್.ಪಿ ಸಾಹಿಲ್ ಬಾಗಲ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಕೂಡ್ಲಿಗೆರೆ ಗ್ರಾಮದ ರಾಜ್ಯ ಹೆದ್ದಾರಿ 65 ರಲ್ಲಿ ಕೆಇಬಿ ಕಚೇರಿ ಎದುರು ಚೆಕ್ ಪೋಸ್ಟ್ ಹಾಕಿಕೊಂಡು ವಾಹನ ತಪಾಸಣೆ ಮಾಡುತ್ತಿರುವಾಗ, ಚನ್ನಗಿರಿ ಕಡೆಯಿಂದ ಬಂದ ಕಾರನ್ನು ತಪಾಸಣೆ ಮಾಡಲಾಗಿದೆ. ಆ ಕಾರಿನ ಹಿಂಭಾಗದ ಸೀಟಿನ ಕೆಳ ಭಾಗ ಬಟ್ಟೆ ಬ್ಯಾಗ್ ನಲ್ಲಿ ಖಾಕಿ ಬಣ್ಣದ ಗಮ್ ಟೇಪ್ ಸುತ್ತಿರುವ ಒಟ್ಟು 46 ಪ್ಯಾಕೇಟ್ ಗಳಲ್ಲಿ ಮಾದಕ ವಸ್ತು ಗಾಂಜಾ ಇಡಲಾಗಿತ್ತು.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗುತ್ತಿದೆ.
https://www.suddikanaja.com/2021/03/09/huge-explosive-found-in-shivamogga/