ಸುದ್ದಿ ಕಣಜ.ಕಾಂ | SHIVAMOGGA | EDUCATION
ಶಿವಮೊಗ್ಗ: ಪಿಯುಸಿ ಪಾಸ್ ಮಾಡಿರುವ ಬಡ ವಿದ್ಯಾರ್ಥಿಗಳು ಬೆಳಗ್ಗೆ ಕೆಲಸ ಮಾಡಿಕೊಂಡು ಸಂಜೆ ಕಾಲೇಜಿನಲ್ಲಿ ಬಿಕಾಂ ಪದವಿ ಓದಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಸಂಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಉದ್ಯೋಗವನ್ನು ಬೆಳಗಿನ ಅವಧಿಯಲ್ಲಿ ಮಾಡಿಕೊಂಡು ಕುವೆಂಪು ವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿರುವ ಬಿಕಾಂ ಪದವಿಯನ್ನು ಸೇರಲು ಉತ್ತಮ ಅವಕಾಶವಿದೆ. ಇದರ ಸದುಪಯೋಗ ಪಡೆಯುವಂತೆ ತಿಳಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಅವಕಾಶ
ಸಿಎ, ಐಬಿಪಿಎಸ್, ಕೆಎಎಸ್, ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೆಳಗ್ಗಿನ ಅವಧಿಯಲ್ಲಿ ಕೋಚಿಂಗ್ ಸೆಂಟರ್ ಸೇರಿಕೊಂಡು ಅಥವಾ ಮನೆಯಲ್ಲೇ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಂಜೆ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದಾಗಿದೆ. ಹಾಸ್ಟೆಲ್ ಸೌಲಭ್ಯವಿರುತ್ತದೆ.
ಪ್ರೊ.ಬಿ.ಆರ್.ದಯಾನಂದ್, ಪ್ರಾಂಶುಪಾಲರು, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಸಂಜೆ ಕಾಲೇಜು, ಕುವೆಂಪು ರಂಗ ಮಂದಿರದ ಪಕ್ಕ ಮಹಾವೀರ ರಸ್ತೆ, ಶಿವಮೊಗ್ಗ ಇಲ್ಲಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಪರ್ಕಿಸಬಹುದು. ಮಾಹಿತಿಗಾಗಿ 9480023207, 9844463366, 9844665591, 7204302838 ಸಂಪರ್ಕಿಸಲು ತಿಳಿಸಲಾಗಿದೆ.
ಪ್ರವೇಶಕ್ಕಾಗಿ ಸಲ್ಲಿಸಬೇಕಾದ ದಾಖಲೆಗಳು
ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿ, ಟಿಸಿ ಮೂಲ ದಾಖಲೆ, ಆಧಾರ್ ಕಾರ್ಡ್, ಮೂರು ಭಾವಚಿತ್ರ, ಮೂರು ಸೆಟ್ಟು ನಕಲು ಪ್ರತಿ ಸಲ್ಲಿಸತಕ್ಕದ್ದು.
https://www.suddikanaja.com/2020/11/28/ias-kas-training-program-in-shivamogga/