ಸುದ್ದಿ ಕಣಜ.ಕಾಂ | KARNATAKA | RELIGION
ಶಿವಮೊಗ್ಗ: ಅಣ್ಣ ತಂಗಿಯರ ಪವಿತ್ರ ಬಾಂಧವ್ಯದ ಪ್ರತೀಕವಾದ ರಕ್ಷಾ ಬಂಧನದೊಂದಿಗೆ ಪುರಾಣದ ಕಥೆಗಳು, ಕಥಾನಕಗಳು ತಳುಕು ಹಾಕಿಕೊಂಡಿವೆ.
ನಮ್ಮ ದೇಶದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ‘ಯಜುರ್ ಉಪಕರ್ಮ’ ಎಂದು ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮುಂಚೆ ಉತ್ತರ ಭಾರತದ ಪ್ರಾಂತ್ಯಗಳಲ್ಲಿ ಹೆಚ್ಚು ಪ್ರಚಲಿತವಾಗಿದ್ದ ‘ರಕ್ಷಾ ಬಂಧನ’ ಈಗ ಭಾರತದಾದ್ಯಂತ ಪಸರಿಸಿಕೊಂಡಿದೆ. ಅತ್ಯಂತ ಶ್ರದ್ಧೆ, ಪ್ರೀತಿ ಮತ್ತು ಆಸ್ಥೆಯಿಂದ ಇದನ್ನು ಆಚರಿಸಲಾಗುತ್ತಿದೆ.
https://www.suddikanaja.com/2021/05/12/free-online-consultation-for-corona/
ರಾಖಿ, ಸಾಲುನೊ, ಸಿಲೋನೋ, ರಾತ್ರಿ ಎಂಬ ಪರ್ಯಾಯ ಹೆಸರುಗಳಿದ್ದು, ರಾಖಿಯನ್ನು ಕಟ್ಟಿ ಆರತಿ ಮಾಡಿ ಸಹೋದರನ ಆಶೀರ್ವಾದ ಬೇಡಲಾಗುತ್ತದೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭಾತೃತ್ವದ ಭಾವನೆಯ ಸಂಕೇತ ಇದಾಗಿದೆ.
ರಕ್ಷಾ ಬಂಧನದ ಬಗ್ಗೆ ಇರುವ ಪುರಾಣದ ಕಥೆಗಳು
ಹಿಂದೂ ಪುರಾಣಗಳ ಪ್ರಕಾರ, ದೇವತೆಗಳು ಮತ್ತು ರಾಕ್ಷಸರ ನಡುವೆ 12 ವರ್ಷಗಳ ಕಾಲ ನಿರಂತರ ಯುದ್ಧ ನಡೆಯುತ್ತದೆ. ಅದರಲ್ಲಿ ಇಂದ್ರ ಸೋಲುತ್ತಾನೆ. ರಾಕ್ಷಸರು ಇಂದ್ರನ ಸಿಂಹಾಸನವನ್ನು ವಶಕ್ಕೆ ಪಡೆಯುತ್ತಾರೆ. ದೇವತೆಗಳು ತಮ್ಮ ಆಧ್ಯಾತ್ಮಿಕ ಶಿಕ್ಷಕರೆಂದೇ ಹೇಳಲಾಗುವ ಬ್ರಹಸ್ಪತಿಯ ಬಳಿಗೆ ಹೋಗುತ್ತಾರೆ. ಆಗ ಬೃಹಸ್ಪತಿಯು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಮಂತ್ರಗಳನ್ನು ಪಠಿಸುತ್ತಾ ಅದೇ ಸಂದರ್ಭದಲ್ಲಿ ದಾರಗಳಿಂದ ಆವೃತ್ತವಾಗಿದ್ದ ಚಿಕ್ಕ ಪೊಟ್ಟಣವೊಂದನ್ನು ನೀಡುತ್ತಾನೆ. ಮಂತ್ರ ಶಕ್ತಿ ಮತ್ತು ರಕ್ಷಣೆಯ ಆಶೀರ್ವಾದಗಳೊಂದಿಗೆ ಪೊಟ್ಟಣವನ್ನು ಇಂದ್ರನ ಪತ್ನಿಯಾದ ಇಂದ್ರಾಣಿ ಅಥವಾ ಶಾಚಿಯು ಇಂದ್ರನ ಬಲ ಮುಂಗೈಯಿಗೆ ಕಟ್ಟುತ್ತಾಳೆ. ನಂತರ, ಆತ ಯುದ್ಧದಲ್ಲಿ ಜಯಶಾಲಿಯಾಗುತ್ತಾನೆ. ಇದೂ ರಕ್ಷಾ ಬಂಧನವನ್ನು ಪುಷ್ಠಿಕರಿಸುತ್ತದೆ.
https://www.suddikanaja.com/2021/05/22/book-review-of-sadhya-sasadhya-naduve/
ಪುರಾಣದ ಇನ್ನೊಂದು ಕಥೆಯ ಪ್ರಕಾರ, ದ್ರೌಪದಿಯು ಶ್ರೀಕೃಷ್ಣ ಪರಮಾತ್ಮನಿಗೆ ರಾಖಿಯನ್ನು ಕಟ್ಟಿದಳೆಂದು ಹೇಳಲಾಗುತ್ತದೆ. ಅದೇ ರೀತಿ, ಪಾರ್ವತಿಯು ವಿಷ್ಣುವಿಗೆ ದಾರವನ್ನು ಕಟ್ಟಿ ಅಣ್ಣನಾಗಿ ಸ್ವೀಕರಿಸಿದ್ದರು. ಆಗ ಎಲ್ಲ ಅಪಾಯಗಳಿಂದ ರಕ್ಷಿಸುವ ಭರವಸೆಯನ್ನು ವಿಷ್ಣುವು ನೀಡಿದ್ದರು ಎನ್ನಲಾಗುತ್ತದೆ.
ಪೋರಸ್ ಬಳಿ ಮನವಿ ಮಾಡಿದ್ದ ಅಲೆಕ್ಸಾಂಡರ್ ಪತ್ನಿ!
ಅಲೆಕ್ಸಾಂಡರ್ ಭಾರತದ ಮೇಲೆ ದಂಡಯಾತ್ರೆ ಕೈಗೊಂಡಿದ್ದಾಗ ಪ್ರಬಲವಾಗಿ ನಿಂತವರಲ್ಲಿ ಒಬ್ಬ ಪೋರಸ್. ಆ ವೇಳೆ, ಅಲೆಕ್ಸಾಂಡರ್ ನ ಪತ್ನಿ ರೊಕ್ಸಾನಾ, ಪೋರಸ್ ಗೆ ಒಂದು ದಾರವನ್ನು ಕಳುಹಿಸುತ್ತಾಳೆ. ಅದರಲ್ಲಿ ತನ್ನ ಪತಿಯನ್ನು ಕೊಲ್ಲದಂತೆ ಮನವಿ ಕೂಡ ಮಾಡುತ್ತಾಳೆ. ಹೀಗಾಗಿಯೇ ಅಲೆಕ್ಸಾಂಡರಿಗೆ ಆತ ಕೊಲ್ಲಲಿಲ್ಲ ಎಂಬುವುದು ಒಂದು ದಂತಕಥೆ.
ಕಿತ್ತೂರಿನ ರಾಣಿ ಚೆನ್ನಮ್ಮಳು ಹುಮಾಯೂನ್ ಗೆ ರಾಖಿ ಕಳುಹಿಸಿದ್ದಳು. ಅದನ್ನು ಸ್ಪರ್ಶಿಸುವ ಮೂಲಕ ಚಕ್ರವರ್ತಿಯು ರಕ್ಷಣೆಯ ಅಭಯ ನೀಡಿದ್ದ. ಚಕ್ರವರ್ತಿ ಬಹದ್ದೂರ್ ಶಾ ಕಿತ್ತೂರಿನ ಮೇಲೆ ಆಕ್ರಮಣ ಮಾಡಿದಾಗ ಹುಮಾಯೂನ್ ಕರ್ಣಾವತಿಯ ಸಹಾಯಕ್ಕೆ ಸೈನ್ಯ ಕಳುಹಿಸಿದ್ದ ಎನ್ನಲಾಗಿದೆ. ಹೀಗೆ ಹಲವು ಪುರಾಣದ ಕಥೆಗಳು ರಕ್ಷಾ ಬಂಧನದ ಬಗ್ಗೆ ಹೇಳುತ್ತವೆ.
ಬದಲಾದ ಸನ್ನಿವೇಶದಲ್ಲೂ ಅರ್ಥ ಉಳಿಸಿಕೊಂಡಿರುವ ರಕ್ಷಾ ಬಂಧನ
21ನೇ ಶತಮಾನದ ಬದಲಾದ ಸನ್ನಿವೇಶದಲ್ಲೂ ರಕ್ಷಾ ಬಂಧನ ತನ್ನ ಅರ್ಥ ಉಳಿಸಿಕೊಂಡಿದೆ. ಭಾತೃತ್ವ ಭಾವದ ಸಂಕೇತವಾಗಿ ಗುರುತಿಸಿಕೊಂಡಿದೆ. ಮುಂಚೆ ದಾರದ ಎಳೆಗೆ ಸೀಮಿತವಾಗಿದ್ದ ಹಬ್ಬವೀಗ ರಾಖಿಯ ಸ್ವರೂಪ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿಗಳು ಲಗ್ಗೆ ಇಟ್ಟಿವೆ. ಟ್ರೆಂಡ್ ಗೆ ಅನುಸಾರವಾಗಿ ವಿನ್ಯಾಸಗಳನ್ನು ನೀಡಲಾಗುತ್ತಿದೆ.
https://www.suddikanaja.com/2021/01/25/hunasodu-blast-case-four-accused-arrested/