ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಮೂವರನ್ನು ಬಂಧಿಸಲಾಗಿದೆ.
ಇಲಿಯಾಸ್ ನಗರದ ಸೈಯ್ಯದ್ ಸಾದಿಕ್(38) ಎಂಬಾತನನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಸೆಪ್ಟೆಂಬರ್ 24ರಂದು ಕೊಲೆ ಮಾಡಲಾಗಿತ್ತು.
READ | ಸಾಲದ ಹಣ ವಾಪಸ್ ಕೇಳಿದ್ದಕ್ಕೆ ನಡೀತು ಬರ್ಬರ ಕೊಲೆ
ಹಣ ಕೊಡುವುದಾಗಿ ನಂಬಿಸಿ ಕೊಲೆ
ಸಾದಿಕ್ ಕೈ ಸಾಲ ನೀಡಿದ್ದು, ಅದನ್ನು ಕೊಡುವಂತೆಒತ್ತಾಯ ಮಾಡುತಿದ್ದ. ಇದರಿಂದಾಗಿ, ಆರೋಪಿಗಳು ಹಣ ನೀಡುವುದಾಗಿ ನಂಬಿಸಿದ್ದಾರೆ. ಫೋನ್ ಮಾಡಿ ಕಲ್ಲೂರು ಇಂಡಸ್ಟ್ರೀಯಲ್ ಏರಿಯಾ ಶಾರದಾ ಕಾಲೊನಿ ಚಾನೆಲ್ ಹತ್ತಿರ ಹಣ ಕೊಡುವುದಾಗಿ ಹೇಳಿ ಕರೆಸಿಕೊಂಡಿದ್ದಾರೆ. ನಂತರ, ತಲೆಯ ಮೇಲೆ ಹಾಕಿ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ, ಬೈಕ್ ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.