ಸುದ್ದಿ ಕಣಜ.ಕಾಂ | TALUK | POLITICS
ಭದ್ರಾವತಿ: ನಗರ ಸಭೆಯ ವಾರ್ಡ್ ಸಂಖ್ಯೆ 29ರ ಮತದಾನ ಪ್ರಕ್ರಿಯೆ ಭರದಿಂದ ಸಾಗಿದೆ. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಕಾಂಗ್ರೆಸ್ ಅಭ್ಯರ್ಥಿ ಶ್ರುತಿ ಮಂಜುನಾಥ್ ನಿಧನದಿಂದಾಗಿ ಮುಂದೂಡಲಾಗಿದ್ದ ಚುನಾವಣೆ ಇಂದು ನಡೆಯುತ್ತಿದ್ದು, ಮತದಾರರು ಅಭ್ಯರ್ಥಿ ಭವಿಷ್ಯ ನಿರ್ಧರಿಸಲಿದ್ದಾರೆ.
READ | ಡಿಗ್ರಿ, ಪಿಜಿ ಮುಗಿಸಿದವರಿಗೆ ಇಲ್ಲಿದೆ ಉದ್ಯೋಗ ಅವಕಾಶ
ಈ ವಾರ್ಡಿನಲ್ಲಿ 1,688 ಮಹಿಳಾ ಹಾಗೂ 1,686 ಪುರುಷರು ಸೇರಿ ಒಟ್ಟು 3,374 ಮತದಾರರಿದ್ದಾರೆ.
ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ 20 ಪೋಲಿಂಗ್ ಸಿಬ್ಬಂದಿ, 8 ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಬಿಜೆಪಿಯಿಂದ ರಮಾ ವೆಂಕಟೇಶ್, ಕಾಂಗ್ರೆಸ್ ನಿಂದ ಲೋಹಿತಾ ನಂಜಪ್ಪ ಹಾಗೂ ಜೆಡಿಎಸ್ ನಿಂದ ನಾಗರತ್ನಾ ಅನಿಲ್ ಕುಮಾರ್ ಅವರು ಕಣದಲ್ಲಿದ್ದಾರೆ.