ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರ ಸಮೀಪದ ತೋಟವೊಂದರಲ್ಲಿ ಉದ್ಯಮಿಯೊಬ್ಬರ ಬರ್ಬರ ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಇಲಿಯಾಸ್ ನಗರದ ಸೈಯದ್ ಸಾದಿಕ್ (40) ಕೊಲೆಯಾದ ಉದ್ಯಮಿ. ಕಲ್ಲೂರು ಹೊಸಳ್ಳಿ ಸಮೀಪದ ತೋಟದಲ್ಲಿ ಕೊಲೆ ಮಾಡಲಾಗಿದ್ದು, ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿರುವುದಾಗಿ ಶಂಕಿಸಲಾಗಿದೆ. ಆದರೆ, ಇದುವರೆಗೆ ಕೊಲೆಗೆ ಖಚಿತ ಕಾರಣ ಗೊತ್ತಾಗಿಲ್ಲ. ಘಟನಾ ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿದ್ದಾರೆ.