ಸುದ್ದಿ ಕಣಜ.ಕಾಂ | DISTRICT | GANESH FESTIVAL
ಶಿವಮೊಗ್ಗ: ಕೋವಿಡ್ ಕಾರಣದಿಂದಾಗಿ ಅತ್ಯಂತ ಸರಳವಾಗಿ ಹಿಂದೂ ಮಹಾಸಭಾ ಗಣಪತಿ ಮೂರ್ತಿಯನ್ನು ತುಂಗಾನದಿಗೆ ಭಾನುವಾರ ಮಧ್ಯಾಹ್ನ 12.15ಕ್ಕೆ ವಿಸರ್ಜನೆ ಮಾಡಲಾಯಿತು.
ಹಿಂದೂ ಮಹಾಸಭಾ ಗಣೇಶ ಮೂರ್ತಿ ವಿಸರ್ಜನೆ ವಿಡಿಯೋ ವೀಕ್ಷಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಿಂದೂ ಸಂಘಟನೆಗಳ ಮಹಾಮಂಡಳದ ನಿರ್ಧಾರದಂತೆ ರಾಜಬೀದಿ ಮೆರವಣಿಗೆ ಮಾಡದಿರಲು ನಿರ್ಧರಿಸಲಾಗಿತ್ತು. ಆದರೆ, ಭಕ್ತಿ ಭಾವದಿಂದ ಗಣಪತಿ ಮೂರ್ತಿಯನ್ನು ಪೂಜಿಸಿ ಕೋಟೆ ಭೀಮೇಶ್ವರ ದೇವಸ್ಥಾನದಿಂದ ಸರಳ ಮೆರವಣಿಗೆಯೊಂದಿಗೆ ತುಂಗಾನದಿಗೆ ತಂದು ವಿಸರ್ಜನೆ ಮಾಡಲಾಯಿತು.
ಹರ ಹರ ಮಹಾದೇವ ಹಾಗೂ ಶ್ರೀರಾಮನ ನಾಮದ ಘೋಷಣೆಗಳನ್ನು ಕೂಗುತ್ತಾ ಯುವಕರು, ವಿವಿಧ ಸಂಘಟನೆ ಪ್ರಮುಖರು ಸೇರಿ ವಿಸರ್ಜನೆ ಮಾಡಿದರು.