ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: 13 ದಿನಗಳ ಜೀವನ್ಮರಣ ಹೋರಾಟದ ಬಳಿಕ ಶನಿವಾರ ಮಗು ಮೃತಪಟ್ಟಿದೆ.
ಅರಕೆರೆ ಗ್ರಾಮದ ಧನರಾಜ್(3) ಎಂಬಾತ ಮೃತಪಟ್ಟಿದ್ದಾನೆ. ಅಡಿಕೆ ಹಾಲು ಕುದಿಸುವ ಹಂಡೆಯನ್ನು ನೋಡಲು ಹೋದಾಗ ಆಯತಪ್ಪಿ ಒಳಗೆ ಬಿದ್ದಿದ್ದು, ಬಿಸಿಯಾಗಿದ್ದರಿಂದ ಮೈ ಸುಟ್ಟಿದೆ. ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.