ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಇದುವರೆಗೆ ಜಿಲ್ಲೆಯಲ್ಲಿ 5 ಅಭ್ಯರ್ಥಿಗಳು ಒಟ್ಟು 10 ನಾಮಪತ್ರ ಸಲ್ಲಿಸಿದ್ದಾರೆ.
ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಬಿಜೆಪಿಯಿಂದ ಡಿ.ಎಸ್.ಅರುಣ್ ಮತ್ತು ಕಾಂಗ್ರೆಸ್ ನಿಂದ ಆರ್.ಪ್ರಸನ್ನಕುಮಾರ್ ಕಣದಲ್ಲಿರುವುದು ಫೈನಲ್ ಆಗಿದೆ. ಇನ್ನುಳಿದಂತೆ, ಪಕ್ಷೇತರರು ಹಾಗೂ ಜೆಡಿಯುದಿಂದಲೂ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಶಿವಮೊಗ್ಗ ಮಟ್ಟಿಗೆ ಇದು ನೇರ ಹಣಾಹಣಿಯಾಗಿ ಮಾರ್ಪಡಲಿದೆ.
ಈಗಾಗಲೇ ಆರ್.ಪ್ರಸನ್ನಕುಮಾರ್ ಅವರು ವಿಧಾನ ಪರಿಷತ್ತು ಸದಸ್ಯರಾಗಿದ್ದು, ಈಗಾಗಲೇ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇನ್ನೊಂದೆಡೆ ಅರುಣ್ ಅವರ ಹೆಸರು ಘೋಷಣೆಗೂ ಮುನ್ನವೇ ಜಿಲ್ಲಾ ಬಿಜೆಪಿಯಿಂದ ಜನಸ್ವರಾಜ್ ಸಮಾವೇಶ ಆಯೋಜಿಸಿ ತಮ್ಮ ಬಲವನ್ನೂ ಬಿಜೆಪಿ ತೋರಿಸಿದೆ. ಈಗಾಗಲೇ ಚುನಾವಣೆ ಕಣ ರಂಗೇರಿದ್ದು, ಸ್ಥಳೀಯ ಸಂಸ್ಥೆಯಲ್ಲಿ ತಮ್ಮ ಬಲಾಬಲವನ್ನು ಪಕ್ಷಗಳು ಸಾಬೀತು ಪಡಿಸುತ್ತಿವೆ.
ಬಿಜೆಪಿಯಿಂದ ಕಣದಲ್ಲಿರುವ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಯಮದ ಅಧ್ಯಕ್ಷ ಡಿ.ಎಸ್.ಅರುಣ್ ಅವರು ಸಾರ್ವಜನಿಕ ಜೀವನದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ರಾಜಕೀಯ ಮಾತ್ರವಲ್ಲದೇ ಕೈಗಾರೊಕೋದ್ಯಮಿ, ರಾಜ್ಯ ಕ್ರಿಕೆಟ್ ಅಸೋಸಿಯೇಶನ್, ರೋಟರಿ ಹೀಗೆ ಹಲವು ಸಂಘ- ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಇದರೊಂದಿಗೆ ಇವರ ತಂದೆ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಾಗಿದ್ದು, ಮೊದಲ ಬಾರಿಗೆ ಅರುಣ್ ಚುನಾವಣಾ ಕಣದಲ್ಲಿದ್ದಾರೆ. ಆರ್.ಆರ್.ಎಸ್. ಸೇರಿ ವಿದ್ಯಾರ್ಥಿ ಪರಿಷತ್ತಿನಲ್ಲೂ ಅರುಣ್ ಸಕ್ರಿಯವಾಗಿದ್ದವರು. ಇದೆಲ್ಲವು ಅವರಿಗೆ ಪ್ಲಸ್ ಪಾಯಿಂಟ್ ಆಗಲಿವೆ.
ಇದುವರೆಗೆ ಸಲ್ಲಿಕೆಯಾದ ನಾಮಪತ್ರಗಳು
- ಆರ್. ಪ್ರಸನ್ನ ಕುಮಾರ್ (ಕಾಂಗ್ರೆಸ್) 3
- ವೈ.ಎಚ್.ನಾಗರಾಜ್ (ಪಕ್ಷೇತರ) 3
- ಡಿ.ಎಸ್.ಅರುಣ್ (ಬಿಜೆಪಿ) 2
- ಆರ್.ಎಸ್. ಭುಜಂಗ (ಪಕ್ಷೇತರ) 1
- ಬಿ.ಕೆ. ಶಶಿಕುಮಾರ್ (ಜೆಡಿಯು) 1