ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಗೋವು, ಎಮ್ಮೆಗಳನ್ನು ಕತ್ತರಿಸಿ ಮಾಂಸ ಮಾರಾಟ ಮಾಡುತಿದ್ದ ಮನೆಯೊಂದರ ಮೇಲೆ ದೊಡ್ಡಪೇಟೆ ಪೊಲೀಸರು ಮಂಗಳವಾರ ದಾಳಿ ಮಾಡಿದರು. ಪೊಲೀಸರನ್ನು ಗಮನಿಸಿದ್ದೇ ಆರೋಪಿ ಪರಾರಿಯಾಗಿದ್ದಾನೆ.
ತೀರ್ಥಹಳ್ಳಿಯಲ್ಲಿ ಗೋವುಗಳನ್ನು ಸಾಗಿಸುತಿದ್ದವರ ಮೇಲೆ ನಡೆದ ಘಟನೆಯ ಬಳಿಕ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆಗಳ (Slaughter house) ಮೇಲೆ ಪೊಲೀಸರು ಸಮರೋಪಾದಿ ದಾಳಿ ನಡೆಸಿದ್ದಾರೆ. ಹೀಗಾಗಿ, ಮಂಡ್ಲಿಯ ಸವಾಯಿಪಾಳ್ಯದ ಮನೆಯೊಂದರಲ್ಲಿ ಪ್ರಾಣಿಗಳನ್ನು ಕತ್ತರಿಸಿ ಮಾಂಸ ಮಾರಾಟ ಮಾಡಲಾಗುತಿತ್ತು.
READ | 1 ತಿಂಗಳಲ್ಲಿ 2 ಕಾಡಾನೆ ಸಾವು, ತ್ಯಾಗದಬಾಗಿ ಅರಣ್ಯದಲ್ಲಿ ಮೃತಪಟ್ಟ ಆನೆ ದಂತದ ತೂಕ ಬರೋಬ್ಬರಿ 41 ಕೆಜಿ
ಪೊಲೀಸರನ್ನು ಕಂಡು ಎಸ್ಕೇಪ್
ಸವಾಯಿಪಾಳ್ಯದ ಅಲ್ತಾಫ್ ಎಂಬಾತ ಮನೆಯಲ್ಲಿಯೇ ಮಾಂಸ ಮಾರಾಟ ಮಾಡುತ್ತಿರುವ ವಿಚಾರ ಪೊಲೀಸರಿಗೆ ತಲುಪಿದೆ. ದೊಡ್ಡಪೇಟೆ ಇನ್ ಸ್ಪೆಕ್ಟರ್ (PI) ಹರೀಶ್ ಪಟೇಲ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.
ಮಾಂಸ ಮಾರಾಟದ ದಂಧೆ ಮಾಡುತ್ತಿದ್ದ ಅಲ್ತಾಫ್ ಪರಾರಿಯಾಗಿದ್ದು, ಮನೆಯಲ್ಕಿದ್ದಯ 30 ಕೆಜಿಗೂ ಹೆಚ್ಚು ಮಾಂಸ, ಕತ್ತಿ, ಚಾಕು ಇತ್ಯಾದಿ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/12/01/after-thirthahalli-hit-and-run-case-shivamogga-police-arrested-6-people-who-had-meat-shop/