ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ಅಡಿಕೆ ಕೊನೆ ಕೊಯ್ಯುತ್ತಿದ್ದಾಗ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗಳೇಮನೆಯ ತೋಟವೊಂದರಲ್ಲಿ ಗುರುವಾರ ನಡೆದಿದೆ.
ಚಳ್ಮನೆಯ ನರಸಿಂಹಗೌಡ (63) ಮೃತಪಟ್ಟಿದ್ದಾರೆ. ಇವರು ಕೊನೆ ಕೊಯ್ಯಲು ಮರ ಹತ್ತಿದ್ದು ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ಘಟನೆ ಸಂಭವಿಸಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.