ಸುದ್ದಿ ಕಣಜ.ಕಾಂ | TALUK | POLITICAL NEWS
ಶಿಕಾರಿಪುರ: ತಾಲೂಕಿನ ಮುಡುಬಸಿದ್ದಾಪುರ, ಹಾರೂಗೋಪ್ಪ, ಹೋತನಕಟ್ಟೆ ಗ್ರಾಮ ಪಂಚಾಯಿತಿಯ ಒಟ್ಟು 39 ಜನರಿಗೆ ಹಕ್ಕು ಪತ್ರವನ್ನು ಸಂಸದ ಬಿ. ವೈ. ರಾಘವೇಂದ್ರ ಮಂಗಳವಾರ ವಿತರಣೆ ಮಾಡಿದರು.
ತಾಲೂಕು ಪಂಚಾಯಿತಿಯಲ್ಲಿ ನಿವೇಶನ ರಹಿತರಿಗೆ ನೀವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳಿಗೆ ಬಸವ ವಸತಿ ಮತ್ತು ಅಂಬೇಡ್ಕರ್ ಯೋಜನೆಯಡಿ ವಸತಿ ಸೌಲಭ್ಯ ನೀಡಲಾಗಿದೆ ಎಂದರು.
READ | ‘ಪ್ರಕಾಶ್’ ಟ್ರವೆಲ್ಸ್ ಮಾಲೀಕರ ರೋಚಕ ಬದುಕು, ಪ್ರತಿ ನವೋದ್ಯಮಿಗೂ ಮಾದರಿ, ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಅಂಶಗಳಿವು
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಬಡವರಿಗೋಸ್ಕರ ಜನಪರ ಯೋಜನೆಯನ್ನು ಮಾಡುತ್ತಿದೆ. ನಿಕಟ ಪೂರ್ವ ಮುಖ್ಯಮಂತ್ರಿ ಬಿ.ವೈ.ಯಡಿಯೂರಪ್ಪ ಅವರು ನಿವೇಶನ ರಹಿತರಿಗೆ ನಿವೇಶನ ಕೊಡಿಸುವ ಕೆಲಸವನ್ನು ಆದ್ಯತೆಯ ಮೇಲೆ ಮಾಡುತ್ತಿದೆ ಎಂದರು.
ತಾಲೂಕಿನ ಇನ್ನೂ 13 ಗ್ರಾಮದ 850 ಹಕ್ಕುಪತ್ರ ಬಾಕಿ ಇದೆ. ಕೂಡಲೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಬಡವರಿಗೆ ನಿವೇಶನ ಮಂಜೂರು ಮಾಡಬೇಕು ಎಂದು ಹೇಳಿದರು.
ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚೆನ್ನವೀರಣ್ಣ, ಕೊಳಗಿ ರೇವಣ್ಣಪ್ಪ, ಹುನುಮಂತ್ತಪ್ಪ, ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.
https://www.suddikanaja.com/2021/01/23/atal-bihari-vajpayee-layout-issue-will-solve-in-3-months/