ಸುದ್ದಿ ಕಣಜ.ಕಾಂ | KARNATAKA | STATE BUDGET
ಬೆಂಗಳೂರು: ಕಾರಣಗಿರಿ ಮತ್ತು ಬಪ್ಪನಮನೆ ಸಂಪರ್ಕ ರಸ್ತೆಯ ಶರಾವತಿ ಹಿನ್ನೀರನ ಬಿಲ್ಸಾಗರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಈ ಬಾರಿಯ ಆಯವ್ಯಯದಲ್ಲಿ ಅಂದಾಜು 18 ಕೋಟಿ ರೂಪಾಯಿಗಳ ಅನುದಾನ ಒದಗಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ.
READ | ಹಿಜಾಬ್ ವಿವಾದ, ಇಬ್ಬರು ಪುರಸಭೆ ಸದಸ್ಯ ಸೇರಿ 9 ಜನರ ವಿರುದ್ಧ ಎಫ್ಐಆರ್
ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಾಗರ ಶಾಸಕ ಹರತಾಳು ಹಾಲಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ಅರುಣ್ ನೇತೃತ್ವದ ನಿಯೋಗ, ಬೊಮ್ಮಾಯಿ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತ್ತು.
ನಿಯೋಗದಲ್ಲಿ ಸ್ಥಳೀಯರಾದ ಕೆ.ವಿ.ಕೃಷ್ಣಮೂರ್ತಿ, ನಗರ ಸೊಸೈಟಿ ಗುರುರಾಜ್, ಕೆ.ಎಸ್.ರವಿ, ಮಧುಸೂದನ್ ನಾವಡ, ಶಾಂತ ಮೂರ್ತಿ ಇತರರು ಉಪಸ್ಥಿತರಿದ್ದರು.