ಸುದ್ದಿ ಕಣಜ.ಕಾಂ | TALUK | HIJAB CONTROVERSY
ಶಿರಾಳಕೊಪ್ಪ: ಪಟ್ಟಣದಲ್ಲಿ ಬುಧವಾರ ಹಿಜಾಬ್ ವಿಚಾರವಾಗಿ ಪ್ರತಿಭಟನೆ ನಡೆಸಿದ 9 ಜನರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಾಳಕೊಪ್ಪದ ಸೈಯದ್ ಬಿಲಾಲ್, ರಾಹೀಲ್, ನೌಷದ್, ಮುಜಾಹಿದ್ದೀನ್ ಅಹಮದ್, ಸುಹೇಲ್ ಅಹಮದ್, ಅತೀಕರ್ ರೆಹಮಾನ್, ನಿಜಾಪುದ್ದಿನ್ ಹಾಗೂ ಪುರಸಭೆ ಸದಸ್ಯರಾದ ಮುದಾಸಿರ್, ಸಾದಿಕ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
READ | ನಾಯಿ ಕಟ್ಟುವ ವಿಚಾರದಲ್ಲಿ ಕಿರಿಕ್, ದಂತ ವೈದ್ಯೆ ಮೇಲೆ ಹಲ್ಲೆ, ಕಾರಿನ ಗಾಜು ಪೀಸ್ ಪೀಸ್
ಗುರುವಾರವೂ ಮುಂದುವರಿದ ಪ್ರತಿಭಟನೆ
ಗುರುವಾರವೂ ಪ್ರತಿಭಟನೆ ಮುಂದುವರಿದಿದೆ. ಕರ್ನಾಟಕ ಪಬ್ಲಿಕ್ (ಕೆಪಿಎಸ್) ಶಾಲೆಯ ಪಿಯುಸಿ ವಿದ್ಯಾರ್ಥಿನಿಯರು, ತಡಗಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿದರು. ತಹಶೀಲ್ದಾರ್ ಕವಿರಾಜ್, ಡಿವೈಎಸ್.ಪಿ ಶಿವಾನಂದ್ ಮದರಕಂಡಿ, ಡಿಡಿಪಿಐ ಎನ್.ಎಂ.ರಮೇಶ್ ಸೇರಿದಂತೆ ಇತರರು ವಿದ್ಯಾರ್ಥಿಗಳ ಮನವೊಲೈಕೆಗೆ ಯತ್ನಿಸಿದರು. ಆದರೆ, ಅದು ಫಲಪ್ರದವಾಗಲಿಲ್ಲ.