ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ವಿನೋಬನಗರದ ಹುಚ್ಚರಾಯ ಕಾಲೋನಿಯಲ್ಲಿ ಒಂದೇ ದಿನ ಎರಡು ಮನೆಗಳ ಬೀಗ ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಕೇಸ್ ನಂಬರ್ 1
ಇ.ಕೆ.ಮನೋಹರ್ ಅವರ ಮನೆಯಲ್ಲಿ ಚಿನ್ನಾಭರಣ, ನಗದು ಸೇರಿ ಒಟ್ಟು 2.27 ಲಕ್ಷ ರೂಪಾಯಿ ಲೂಟಿ ಮಾಡಲಾಗಿದೆ. ಅಂದಾಜು 15,000 ಮೌಲ್ಯದ 20 ಗ್ರಾಂ ಬೆಳ್ಳಿಯ ಆಭರಣ, 41,000 ರೂ. ಮೌಲ್ಯದ 14 ಗ್ರಾಂ ಬಂಗಾರದ ಉಂಗುರ, 1,15,000 ರೂ. ನಗದು, 51,000 ರೂ. ಮೌಲ್ಯದ 15 ಗ್ರಾಂ ಬಂಗಾರದ ಬ್ರೆಸ್ಲೆಟ್, 55,000 ರೂ. ಮೌಲ್ಯದ 16 ಗ್ರಾಂ ಬಂಗಾರದ ಚೈನ್ ಕಳ್ಳತನ ಮಾಡಲಾಗಿದೆ.
READ | ಗ್ರಾಮ ದೇವತೆ ದರ್ಶನಕ್ಕೆ ಹೋಗುತ್ತಿದ್ದಾಗ ನಡೀತು ಭೀಕರ ಅಪಘಾತ
ಮನೋಹರ್ ಅವರು ಹಿಟಾಚಿ ಕೆಲಸ ಮಾಡಿಕೊಂಡು ಹುಚ್ಚರಾಯ ಕಾಲೋನಿಯಲ್ಲಿ ವಾಸವಾಗಿದ್ದು, ಪತ್ನಿಗೆ ಅನಾರೋಗ್ಯದಿಂದಾಗಿ ಹಾಸನ ಜಿಲ್ಲೆಯ ಕೇರಳಾಪುರ ಗ್ರಾಮಕ್ಕೆ ಕಳುಹಿಸಿದ್ದರು. ಕೆಲಸದ ನಿಮಿತ್ತ ಫೆಬ್ರವರಿ 17ರಂದು ಆಯನೂರಿಗೆ ತೆರಳಿದ್ದಾರೆ. ಆದರೆ, ಫೆ.21ರಂದು ಬೆಳಗ್ಗೆ ಪಕ್ಕದ ಮನೆಯವರು ಕರೆ ಮಾಡಿ ಮನೆಯ ಬೀಗ ಮುರಿದು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ತಕ್ಷಣ ಮನೆಗೆ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಕೇಸ್ ನಂಬರ್ 2
ವಿನೋಬನಗರದ ಹುಚ್ಚರಾಯ ಕಾಲೋನಿಯಲ್ಲಿ ವಾಸವಿರುವ ಎಂ.ಎಲ್.ಪ್ರಶಾಂತಿ ಅವರ ಮನೆಯಲ್ಲಿ 90,000 ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ.
ಬೆಡ್ ರೂಂನ ಹಾಸಿಗೆಯ ಕೆಳಗಡೆ ಇಡಲಾಗಿದ್ದ 5,000 ನಗದು, 40,000 ರೂ. ಮೌಲ್ಯದ 11 ಗ್ರಾಂ ತೂಕದ ಬಂಗಾರದ ಸರ, 15,000 ರೂ. ಮೌಲ್ಯದ 6 ಗ್ರಾಂ ತೂಕದ ಬಂಗಾರದ ಕಿವಿಯೋಲೆ, 10,000 ರೂ. ಮೌಲ್ಯದ 11 ಗ್ರಾಂ ಬಂಗಾರದ ಕಿವಿಯ ಬಟನ್ಸ್, 10,000 ರೂ. ಮೌಲ್ಯದ 50 ಗ್ರಾಂ ಬೆಳ್ಳಿಯ ಕಾಲಿನ ಚೈನ್, 10,000 ರೂ. ಮೌಲ್ಯದ 50 ಗ್ರಾಂ ಬೆಳ್ಳಿಯ ಗಣಪತಿ ವಿಗ್ರಹ ಕಳ್ಳತನ ಮಾಡಲಾಗಿದೆ.
READ | ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕ ಅರೆಸ್ಟ್
ಮೆಗ್ಗಾನ್ ಆಸ್ಪತ್ರೆಯ ಸಖಿ ಕೇಂದ್ರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಪ್ರಶಾಂತಿ ಅವರು ಮಕ್ಕಳನ್ನು ಕಲ್ಲಳ್ಳಿಯಲ್ಲಿರುವ ಅಕ್ಕನ ಮನೆಗೆ ಬಿಟ್ಟು ಫೆ.20ರಂದು ರಾತ್ರಿ 7.30ರ ಸುಮಾರಿಗೆ ಕರ್ತವ್ಯಕ್ಕೆ ಹೋಗಿದ್ದಾರೆ. ಫೆ.21ರ ಬೆಳಗ್ಗೆ 7.30ರ ಸುಮಾರಿಗೆ ಮನೆಯ ಪಕ್ಕದವರು ಕರೆ ಮಾಡಿ ಮನೆಯ ಬೀಗ ಮುರಿದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು ಬಂದು ನೋಡಿದಾಗ ಕಳ್ಳತನ ಮಾಡಲಾಗಿತ್ತು. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/09/25/theft-in-house-at-gopalagowda/