ಸುದ್ದಿ ಕಣಜ.ಕಾಂ | TAlUK | CRIME NEWS
ಸಾಗರ: ತಾಲೂಕಿನ ಸುರುಗುಪ್ಪ ಕೆರೆ ಏರಿಯ ಮೇಲೆ ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಒಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ.
ಸೊರಬ ತಾಲೂಕಿನ ಬಂದಿಗೆ ಗ್ರಾಮ ನಿವಾಸಿ ನಾಗಪ್ಪ(42) ಮೃತಪಟ್ಟಿದ್ದಾರೆ. ಇವರ ಪುತ್ರ ಲೋಹಿತ್(16) ಹಾಗೂ ಯಲಕುಂದ್ಲಿ ನಿವಾಸಿ ಕಿರಣ್(20) ಎಂಬುವವರು ಗಾಯಗೊಂಡಿದ್ದಾರೆ.
READ | ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕ ಅರೆಸ್ಟ್
ನಾಗಪ್ಪ ಅವರು ತಮ್ಮ ಪುತ್ರನೊಂದಿಗೆ ಸಣ್ಣಮನೆ ಗ್ರಾಮದೇವತೆ ಜಾತ್ರೆಗೆ ತೆರಳುತಿದ್ದಾಗ ಎದುರುಗಡೆಯಿಂದ ಬಂದ ಇನ್ನೊಂದು ಬೈಕ್ ಗೆ ಡಿಕ್ಕಿಯಾಗಿದೆ. ನಾಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಾಗರದ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.