ಸುದ್ದಿ ಕಣಜ.ಕಾಂ | TALUK | HANAGEREKATTE
ತೀರ್ಥಹಳ್ಳಿ: ತಾಲೂಕಿನ ಹಣಗೆರೆಕಟ್ಟೆ (Hanagerekatte) ಧಾರ್ಮಿಕ ಕೇಂದ್ರ ಪಕ್ಕದ ಹಳ್ಳವೊಂದು ಸಂಪೂರ್ಣ ಕಲುಷಿತಗೊಂಡಿದೆ.
ಪ್ರತಿಷ್ಠಿತ ಧಾರ್ಮಿಕ ಕೇಂದ್ರವಾದ ಹಣಗೆರೆಕಟ್ಟೆ ಬರುವ ಭಕ್ತಾದಿಗಳು ಹಳ್ಳದಲ್ಲಿ ಬಟ್ಟೆ ಹಾಕಿ ಹೋಗುತ್ತಿರುವುದರಿಂದ ಜಲಧಾರೆ ಕಲುಷಿತಗೊಂಡಿದೆ. ಅಲ್ಲದೇ ಹಳ್ಳದುದ್ದಕ್ಕೂ ಬಟ್ಟೆಯೇ ಕಾಣುತ್ತಿದೆ.
READ | ಜನ್ಮದಿನ ಹಿನ್ನೆಲೆ ಎಲ್ಲೆಡೆ ಪುನೀತ್ ರಾಜಕುಮಾರ್ ಫ್ಲೆಕ್ಸ್, ‘ಸಿನಿ ಜರ್ನಿ’ ನೆನಪು
ಕಣ್ಣಿಡಬೇಕಿದೆ ಜಿಲ್ಲಾಡಳಿತ
ಧಾರ್ಮಿಕ ಕೇಂದ್ರಕ್ಕೆ ಬರುವ ಭಕ್ತರ ಮೇಲೆ ಕಣ್ಣಿಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ. ಈ ಮುಂಚೆ ದೇವಸ್ಥಾನ ಆವರಣದಲ್ಲಿಯೇ ಪ್ರಾಣಿ ಬಲಿ ಸೇರಿದಂತೆ ಇನ್ನಿತರ ಕೃತ್ಯಗಳು ನಡೆಯುತ್ತಿದ್ದವು. ಅದನ್ನು ಬಹುತೇಕ ನಿಯಂತ್ರಿಸಲಾಗಿದೆ. ಆದರೆ, ದೇವಸ್ಥಾನ ಅಕ್ಕಪಕ್ಕದ ಪರಿಸರವನ್ನು ಹಾಳು ಮಾಡುವ ಕೆಲಸಗಳು ನಡೆಯುತ್ತಿದ್ದು, ಅದರ ಮೇಲೆಯೂ ನಿಗಾ ಇಡಬೇಕಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.