ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ತುರ್ತು ಮಾಧ್ಯಮಗೋಷ್ಠಿ ಕರೆದು ಮಾತನಾಡಿದರು. ವಿಪಕ್ಷದವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿರುವ ಈಶ್ವರಪ್ಪ ಅವುಗಳಿಗೆ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ.
READ | ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸ್ವಕ್ಷೇತ್ರದಲ್ಲೇ ಭುಗಿಲೆದ್ದ ಆಕ್ರೋಶ, ಕೋಟೆ ಪೊಲೀಸ್ ಠಾಣೆಗೆ ದೂರು
- ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಆ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭಯ ಪಡುವ ಅಗತ್ಯವಿಲ್ಲ ಎಂಬ ಭರವಸೆ ನೀಡಿದ್ದಾರೆ.
- ರಾಜೀನಾಮೆ ನೀಡುವಂತೆ ರಾಜ್ಯದಾದ್ಯಂತ ಆಗ್ರಹಿಸಲಾಗುತ್ತಿದೆ. ಆದರೆ, ಅಭಿಮಾನಿಗಳು ಕರೆ ಮಾಡಿ ಯಾವ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಅವರಿಗೆ ನಾನು ಋಣಿ
- ಖುದ್ದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರೇ ಕರೆ ಮಾಡಿದ್ದರು. ಅವರೇ ಇದನ್ನು ಷಡ್ಯಂತ್ರ ಎಂದು ಹೇಳಿದ್ದಾರೆ.
- ಸಂತೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಬಹುಶಃ ಅದಕ್ಕಾಗಿ ಅವರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬಂದಿರಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ.
- ಸಂತೋಷ್ ಆತ್ಮಹತ್ಯೆ ಹಾಗೂ ಇದರ ಹಿಂದೆ ನಡೆದಿರುವ ಷಡ್ಯಂತ್ರದ ಬಗ್ಗೆ ಆಮೂಲಾಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಯಾವ ಕಾರಣವೂ ಇಲ್ಲದೇ ಆಧಾರ ರಹಿತವಾಗಿ ಆರೋಪಿ ರಾಜೀನಾಮೆ ಕೇಳಿದರೆ ನೀಡುವುದಿಲ್ಲ
READ | ಚಿನ್ನಾಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್, 53 ಸಾವಿರ ಗಡಿದಾಟಿದ ಅಪರಂಜಿಯ ಬೆಲೆ
ಈ ಪ್ರಶ್ನೆಗಳಿಗೆ ಉತ್ತರಿಸಿ, ನಂತರ ಪ್ರತಿಭಟನೆ ಮಾಡಿ
- ಯಾವುದೇ ಕಾಮಗಾರಿ ಆಗಬೇಕಾದರೆ ಅದಕ್ಕೆ ಕೆಲವೊಂದು ನಿಯಮಗಳಿವೆ. ಅದರಂತೆ, ಕಾಮಗಾರಿಗೆ ಆಡಳಿತಾತ್ಮಕ, ತಾಂತ್ರಿಕ ಅನುಮೋದನೆ ಬೇಕು. ಆದರೆ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಅಂತಹದ್ದೇನನ್ನೂ ಪಾಲಿಸಿಯೇ ಇಲ್ಲ. ಅದಕ್ಕೆ ಅನುದಾನ ನೀಡಲು ಹೇಗೆ ಸಾಧ್ಯ?
- ಗಣಪತಿ ಪ್ರಕರಣದಲ್ಲಿ ಅವರೇ ಖುದ್ದು ಬರೆದು ಹಸ್ತಾಕ್ಷರ ಮಾಡಿದ್ದ ಪತ್ರವಿತ್ತು. ಅದನ್ನು ಡೆತ್ ನೋಟ್ ಎನ್ನಬಹುದು. ಆದರೆ, ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್ ನೋಟ್ ಎನ್ನಲಾಗುತ್ತಿರುವ ವಾಟ್ಸಾಪ್ ಸಂದೇಶವನ್ನು ಡೆತ್ ನೋಟ್ ಎನ್ನಲಾದೀತೇ?
- ಸಂತೋಷ್ ಬಡವ ಎಂದು ಹೇಳಿಕೊಂಡಿದ್ದಾರೆ. ಒಂದುವೇಳೆ, ಅದು ನಿಜವಾಗಿದ್ದರೆ ಅವರು ದೆಹಲಿಗೆ ಹೋಗಲು ಟಿಕೆಟ್ ತೆಗೆಸಿದವರು ಯಾರು?