ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಸಾಗರ ತಾಲೂಕಿನ ದೊಂಬೆ ಗ್ರಾಮದ ತೋಟದಲ್ಲಿ ಕಟಾವು ಮಾಡಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ.
ಸಾಗರ ನಿವಾಸಿಗಳಾದ ಯಶೋಧರ ಅಲಿಯಾಸ್ ಗುಂಡ(23), ಮಂಜುನಾಥ ಅಲಿಯಾಸ್ ಮಂಜ(28), ಅರುಣ (27), ಸಂದೇಶ್ ಅಲಿಯಾಸ್ ಸ್ಯಾಂಡಿ(22), ಶಶಾಂಕ್ ಅಲಿಯಾಸ್ ಪುಟ್ಟ(21), ಕಾರ್ತಿಕ್(20), ಸಂದೀಪ್(24) ಹಾಗೂ ಶಾರೂಕ್ ಅಲಿ(24) ಬಂಧಿತರು.
ಏಳು ಪ್ರಕರಣಗಳನ್ನು ಬೇಧಿಸಿದ ಪೊಲೀಸ್
ಒಟ್ಟು 7 ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ₹5,00,000 ಮೌಲ್ಯದ 805 ಕೆಜಿ ಸಿಪ್ಪೆ ಗೋಟು ಅಡಿಕೆ, 70 ಕೆಜಿ ಚಾಲಿ ಅಡಿಕೆ, 349 ಕೆಜಿ ಕೆಂಪು ಅಡಿಕೆ ಮತ್ತು 200 ಕೆಜಿ ಬಿಳಿ ಗೋಟು ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ 1 ಓಮ್ನಿ ವಾಹನ ಮತ್ತು 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಗ್ರಾಣದಲ್ಲಿ ಸಂಗ್ರಹಿಸಿದ್ದ ಅಡಿಕೆ ಮಾಯವಾಗಿದ್ವು
ದೊಂಬೆ ಗ್ರಾಮದ ತೋಟದಲ್ಲಿ ವ್ಯಕ್ತಿಯೊಬ್ಬರು ಬೆಳದ ಸುಮಾರು 675 ಕೆಜಿಯ ಅಡಿಕೆಯನ್ನು ಕಟಾವು ಮಾಡಿ 12 ಚೀಲಗಳಲ್ಲಿ ತುಂಬಿ ಮನೆಯ ಬಳಿ ಉಗ್ರಾಣದಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆದರೆ, ಜೂನ್ 1ರಂದು ಅಡಿಕೆಯನ್ನು ಕಳ್ಳತನ ಮಾಡಲಾಗಿತ್ತು. ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಾಗರ ಗ್ರಾಮಾಂತರ ಪಿಐ ಮತ್ತು ಸಿಬ್ಬಂದಿಯ ತಂಡವು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
https://suddikanaja.com/2021/09/15/7-lorries-arecanut-seized/