ಸುದ್ದಿ ಕಣಜ.ಕಾಂ | MISSION AMANAT
ಶಿವಮೊಗ್ಗ: ಸಾರ್ವಜನಿಕ ಪ್ರದೇಶದಲ್ಲಿ ಮೆರೆತುಹೋಗಿದ್ದ ಯಾವುದೇ ವಸ್ತು ಮತ್ತೆ ಮಾಲೀನ ಕೈಸೇರುವುದು ವಿರಳ. ಅದರಲ್ಲೂ ರೈಲಿನಲ್ಲಿ ಬಿಟ್ಟಿದ್ದರೆ ಸಿಗುವುದು ಅನುಮಾನ. ಆದರೆ, ಇಲಾಖೆಯವರು ಮಿಷನ್ ಅಮಾತನ್ (Mission Amanat) ಅಡಿಯಲ್ಲಿ ಪ್ರಯಾಣಿಕರು ಮರೆತು ಹೋದ ವಸ್ತುಗಳನ್ನು ಮರಳಿ ನೀಡುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ.
READ | ರೈಲ್ವೆ ಹಳಿ ಮೇಲೆ ಬಿದ್ದ ಮರ, ರೈಲು ಸಂಚಾರಕ್ಕೆ ತೊಡಕು
ಅಂತಹದ್ದೇ ಒಂದು ಘಟನೆ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲೂ ಇತ್ತೀಚೆಡೆ ನಡೆದಿದೆ. ಪ್ರಯಾಣಿಕರೊಬ್ಬರು ರೈಲಿನಿಂದ ತೆರಳುವಾಗ ಅಂದಾಜು 1500 ರೂಪಾಯಿ ಮೌಲ್ಯದ ಮೊಬೈಲ್ ಈಯರ್ ಫೋನ್ ಅನ್ನು ಅಲ್ಲಿಯೇ ಬಿಟ್ಟಿದ್ದರು. ಇದನ್ನು ಗಮನಿಸಿದ ಆರ್.ಪಿ.ಎಫ್ (Railway Protection Force ) ಸಿಬ್ಬಂದಿಯು ಅದನ್ನು ಮರಳಿ ಪ್ರಯಾಣಿಕನಿಗೆ ನೀಡಿದ್ದಾರೆ.