ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (jagadish shettar)ಗೆ ಶಾಸಕ ಕೆ.ಎಸ್.ಈಶ್ವರಪ್ಪ(KS Eshwarappa) ಅವರು ಬಹಿರಂಗ ಪತ್ರ ಬರೆದು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಿಗೆ ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾವಿ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.
READ | ವ್ಯಾಪಾರಸ್ಥರೇ ಹುಷಾರ್, ನಿಯಮ ಮೀರಿದ್ರೆ ಬೀಳುತ್ತೆ ದಂಡ, ಒಂದು ವರ್ಷದಲ್ಲಿ ₹18.30 ಲಕ್ಷ ದಂಡ ಸಂಗ್ರಹ
ಅಧಿಕಾರಕ್ಕಾಗೇ ಕೆಲವರು ಬಿಜೆಪಿ ಸೇರ್ಪಡೆಯಾಗಿದ್ದರು. ಅವರು ಈಗ ಟಿಕೆಟ್ ಸಿಗದಿದ್ದಕ್ಕೆ ಪಕ್ಷ ಬಿಡುತ್ತಿದ್ದಾರೆ. ಅವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಆದರೆ, ಶೆಟ್ಟರ್ ಅವರು ಬಿಜೆಪಿ ಸಿದ್ಧಾಂತಗಳನ್ನು ನಂಬಿ ಕೆಲಸ ಮಾಡಿದ್ದಾರೆ. ಹೋರಾಟದ ನೆಲೆ ಹೊಂದಿದ್ದಾರೆ. ಈಗಲೂ ಮಿಂಚಿಲ್ಲ ಕ್ಷಮಾಪಣೆ ಕೇಳಿ ಮತ್ತೆ ಬಿಜೆಪಿಗೆ ಬನ್ನಿ.
– ಕೆ.ಎಸ್.ಈಶ್ವರಪ್ಪ, ಶಾಸಕರು, ಶಿವಮೊಗ್ಗ
ಶೆಟ್ಟರ್’ಗೆ ಈಶ್ವರಪ್ಪ ಸವಾಲ್
- ಕೇವಲ ಒಂದು ಚುನಾವಣಾ ಟಿಕೆಟ್ಗಾಗಿ ನಿಮ್ಮೆಲ್ಲ ಸಿದ್ಧಾಂತಗಳು ಬದಲಾಗಿ ಹೋದವೇ? ನೀವು ಇನ್ನು ಗೋಹತ್ಯೆಯನ್ನು ಬೆಂಬಲಿಸುತ್ತೀರಾ? ಪಿಎಫ್ಐಯನ್ನು ಒಪ್ಪುತ್ತೀರಾ?
- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಗೋಹತ್ಯೆ ನಿಷೇಧ ಹಿಂಪಡೆಯುತ್ತೇವೆ. ಪಿಎಫ್ಐ ವಿರುದ್ಧದ ನಿಷೇಧ ವಾಪಸ್ ಪಡೆಯುವುದಾಗಿ ಡಿಕೆಶಿ, ಸಿದ್ದರಾಮಯ್ಯ ಹೇಳಿದ್ದಾರೆ. ಒಂದುವೇಳೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನೀವು ಇವೆಲ್ಲವನ್ನು ಬೆಂಬಲಿಸುವಿರಾ?
- ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಂಡಿಲ್ಲ ಎಂದು ನೀವು ಕಾರಣ ಹೇಳಿಕೊಂಡಿದ್ದೀರಿ. ಕಾರ್ಯಕರ್ತರ ಶ್ರಮದ ಫಲವಾಗಿ ನೀವು ಶಾಸಕರಾಗಿ ಮುಖ್ಯಮಂತ್ರಿಯೂ ಆಗಿದ್ದೀರಿ. ಈಗ ಎಮ್ಮೆಲ್ಲೆ ಸೀಟ್’ಗಾಗಿ ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಆರೋಪಿಸುವುದು ಎಷ್ಟು ಸರಿ? ಕಾಂಗ್ರೆಸ್’ನಲ್ಲಿ ವಿವಿಧ ಬಣಗಳಿದ್ದು, ನೀವು ಯಾರೊಂದಿಗೆ ಗುರುತಿಸಿಕೊಳ್ಳುವಿರಿ? ನಿಮಗಲ್ಲಿ ಸ್ಥಾನಮಾನ ಸಿಗುವುದೆ?
- ಕಾಂಗ್ರೆಸ್ ಕಾಂಗ್ರೆಸ್ ಸೇರ್ಪಡೆಯಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದಾ?
- ಜಗದೀಶ್ ಶೆಟ್ಟರ್ ಅವರು ನನ್ನ ಬಹಿರಂಗ ಪತ್ರಕ್ಕೆ ಉತ್ತರ ನೀಡಬೇಕು. ದಿಢೀರ್ ಎಂದು ಪಕ್ಷ ತೊರೆದಿದ್ದಕ್ಕೆ ನೋವಾಗಿದೆ. ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ.
ಪಕ್ಷದ ಪ್ರಮುಖರಾದ ಡಾ. ಧನಂಜಯ ಸರ್ಜಿ, ಎಸ್.ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ಜಗದೀಶ್, ಅಣ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
GOOD NEWS | ನೀವು ಹಣ್ಣು, ತರಕಾರಿ ಬೆಳೆದಿದ್ದೀರಾ ಹಾಗಾದರೆ ಇದನ್ನು ಓದಿ, ಸಹಾಯಕ್ಕಾಗಿ ಇವರಿಗೆ ಕರೆ ಮಾಡಿ