ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಾಸಕ ಕೆ.ಎಸ್.ಈಶ್ವರಪ್ಪ ಅವರು ರಾಜಕೀಯ ನಿವೃತ್ತ ಘೋಷಣೆಯ ಪತ್ರ ವೈರಲ್ ಆಗಿದ್ದೇ ಅಭಿಮಾನಿಗಳು ಅವರು ಮನೆಯ ಮುಂದೆ ಸೇರಿದ್ದಾರೆ.
ರಾಜೀನಾಮೆಯ ಪತ್ರವು ಕೈಸೇರಿದ್ದೇ ಅಭಿಮಾನಿಗಳು ಅವರ ಮನೆಗೆ ದೌಡಾಯಿಸಿದ್ದಾರೆ. ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ.
ಶಿವಮೊಗ್ಗ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪ ಅವರ ನಿವಾಸದ ಮುಂದೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದು, ನಿವೃತ್ತಿಯ ವಿಚಾರ ಶಾಕ್ ಉಂಟು ಮಾಡಿದೆ. ಇದು ನಿಜವೋ ಸುಳ್ಳೋ ಎಂಬ ವಿಷಯದ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ.
ಈಶ್ವರಪ್ಪ ಅವರು ಮನೆಯಲ್ಲೇ ಇದ್ದು, ಹೊರಗಡೆ ಬಂದಿಲ್ಲ. ಕೆಲವು ಮುಖಂಡರು ನಿವಾಸದಲ್ಲಿದ್ದಾರೆ ಎಂದು ತಿಳಿದುಬಂದಿದೆ.