ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬದೊಂದಿU ಮತಗಟ್ಟೆಗೆ ಬುಧವಾರ ಆಗಮಿಸಿ ಮತದಾನ ಮಾಡಿದರು.
ಶಿಕಾರಿಪುರದಲ್ಲಿರುವ ಶ್ರೀ ಹುಚ್ಚರಾಯ ಸ್ವಾಮಿ ದೇಗುಲಕ್ಕೆ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮತ ಚಲಾಯಿಸಿದರು.
READ | ಕುಟುಂಬದೊಂದಿಗೆ ಬಂದ ಮತದಾನ ಮಾಡಿದ ಈಶ್ವರಪ್ಪ, ಮೂರು ವಿಷಯಗಳ ಬಗ್ಗೆ ಹೇಳಿದ್ದೇನು?
ಡಿ.ಎಚ್.ಶಂಕರಮೂರ್ತಿ ಕುಟುಂಬದೊಂದಿಗೆ ಮತದಾನ
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಹಾಗೂ ಪತ್ನಿ ಸತ್ಯವತಿ ಶಂಕರಮೂರ್ತಿ, ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಅವರು ಪತ್ನಿ ಪ್ರತಿಭಾ ಅರುಣ್, ಪುತ್ರಿ ಸುಪ್ರಿಯ ಅವರು ನಗರದ ಬಸವನಗುಡಿಯ ಆನಂದ ಸಾಯಿ ಶಿಕ್ಷಣ ಸಂಸ್ಥೆಯ ಶಾಲೆಯ ಮತಗಟ್ಟೆಯಲ್ಲಿ ಮತವನ್ನು ಚಲಾಯಿಸಿದರು.