ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಈಗಾಗಲೇ ಉತ್ತಮ ಹಂಗಾಮು ಪೂರ್ವ ಮಳೆ (shimoga pre-monsoon rain) ಆರಂಭವಾಗಿದ್ದು, ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆ (Monsoon rain) ಬರುವ ನಿರೀಕ್ಷೆಯೊಂದಿಗೆ ರೈತರು ಭರದಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಮೇ 3 ಕ್ಕೆ ಅಂತ್ಯಗೊಂಡಂತೆ 127 ಮಿ.ಮಿ. ವಾಡಿಕೆ ಮಳೆಯಿದ್ದು, 82 ಮಿ.ಮಿ. ವಾಸ್ತವಿಕ ಮಳೆಯಾಗಿದೆ. ಶೇ.36 ಮಳೆಯ ಕೊರತೆ ಉಂಟಾಗಿರುತ್ತದೆ.
READ | ಕೈಮಗ್ಗ, ಜವಳಿ ಇಲಾಖೆ ಸಮಗ್ರ ತನಿಖೆಗೆ ಎಡಿಸಿ ನೇತೃತ್ವದಲ್ಲಿ ಸಮಿತಿ, ಡಿಸಿ ಮಹತ್ವದ ಘೋಷಣೆ
ಜಿಲ್ಲೆಯಲ್ಲಿ ಬೆಳೆ ಗುರಿ
ಜಿಲ್ಲೆಯಲ್ಲಿ ಭತ್ತ (Paddy) ಮತ್ತು ಮುಸುಕಿನ ಜೋಳ(maize)ವು ಪ್ರಧಾನ ಬೆಳೆಯಾಗಿದೆ. 2023ರ ಮುಂಗಾರಿನಲ್ಲಿ 77,640 ಹೆಕ್ಟೆರ್ ಭತ್ತ, 48,770 ಹೆಕ್ಟೆರ್ ಮುಸುಕಿನ ಜೋಳ, 490 ಹೆಕ್ಟೆರ್ ಇತರೆ ಏಕದಳ, 415 ಹೆಕ್ಟೆರ್ ದ್ವಿದಳ ಧಾನ್ಯ, 97 ಹೆಕ್ಟೆರ್ ಎಣ್ಣೆಕಾಳು ಹಾಗೂ 1,223 ಹೆಕ್ಟೆರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆ(commercial crop) ಗಳನ್ನು ಬೆಳೆಯುವ ಗುರಿ (Target) ಹೊಂದಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದಾದ ಕೀಟ/ ರೋಗ ಬಾಧೆಗೆ ಅವಶ್ಯವಾದ ಕೀಟನಾಶಕಗಳನ್ನು ಸಹ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿರುತ್ತದೆ.
– ಪೂರ್ಣಿಮಾ, ಕೃಷಿ ಜಂಟಿ ನಿರ್ದೇಶಕ
25,715 ಬಿತ್ತನೆ ಬೀಜ ಬೇಡಿಕೆ
ಈ ಎಲ್ಲ ಬೆಳೆಗಳಿಗೆ 25,715 ಕ್ವಿಂಟಾಲ್ ಬಿತ್ತನೆ ಬೀಜದ ಅವಶ್ಯಕತೆ ಇದೆ. ಈಗಾಗಲೇ ಕೆಎಸ್ ಎಸ್.ಸಿ/ ಎನ್.ಎಸ್.ಸಿ/ ಖಾಸಗಿ ಸಂಸ್ಥೆಯಿಂದ ಉತ್ತಮ ಗುಣಮಟ್ಟದ ದೃಢೀಕೃತ ಬಿತ್ತನೆ ಬೀಜ ದಾಸ್ತಾನು ಮಾಡಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಬಿತ್ತನೆ ಬೀಜ ವಿತರಣೆಗೆ ಯಾವುದೇ ಕೊರತೆ ಇರುವುದಿಲ್ಲ. ನಿಗದಿತ ಗುರಿಯನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಶೇ.100 ಕ್ಷೇತ್ರದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇದೆ.
90,334 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ
ಅದೇ ರೀತಿ ಜಿಲ್ಲೆಗೆ 2023ರ ಮುಂಗಾರು ಹಂಗಾಮಿಗೆ 90,334 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರದ ಅವಶ್ಯಕತೆ ಇದ್ದು ಕೆಎಸ್.ಎಸ್.ಸಿ/ ಕೆಎಸ್.ಸಿಎಂಎಫ್/ ಖಾಸಗಿ ವತಿಯಿಂದ ಈಗಾಗಲೇ 63,208 ಮೆ.ಟನ್ ವಿವಿಧ ರಸೊಬ್ಬರಗಳ ದಾಸ್ತಾನು ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ.
Monsoon 2023 | ಈ ವರ್ಷ ನೈರುತ್ಯ ಮುಂಗಾರು ವಿಳಂಬ, ಇನ್ನೂ ಸ್ವಲ್ಪ ದಿನ ಸಹಿಸಿಕೊಳ್ಳಬೇಕಿದೆ ಬಿಸಿಲು, ಕಾರಣವೇನು?