ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಅನ್ಯಕೋಮಿನವರ ನಡುವೆ ನಡೆದ ಗಲಾಟೆ ಪ್ರಕರಣ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ (GK Mithun Kumar) ಅವರು ಸ್ಪಷ್ಟನೆ ನೀಡಿದ್ದಾರೆ.
READ | ಶಿವಮೊಗ್ಗದಲ್ಲಿ ಇಬ್ಬರ ಮೇಲೆ ಅಟ್ಯಾಕ್, ಯುವಕನಿಗೆ ಹರಿತ ಆಯುದ್ಧದಿಂದ ಚುಚ್ಚಿ ಗಾಯ, ಎಲ್ಲಿ ಏನಾಗಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಿಬಿಡುತ್ತಿದ್ದು, ಯಾರೂ ಅದನ್ನು ನಂಬಬಾರದು. ಸುಳ್ಳು ಮಾಹಿತಿಯಯನ್ನು ಯಾರೂ ಹರಬಾರದು. ಈ ಎರಡು ಘಟನೆಗಳಿಗೆ ಪರಸ್ಪರ ಯಾವುದೇ ರೀತಿಯ ಸಂಬಂಧವಿಲ್ಲ.
– ಜಿ.ಕೆ.ಮಿಥುನ್ ಕುಮಾರ್, ಎಸ್ಪಿ, ಶಿವಮೊಗ್ಗ
ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಟಿಪ್ಪುನಗರದಲ್ಲಿ ನಡೆದದ ಘಟನೆಯಲ್ಲಿ ಇಬ್ಬರು ಅನ್ಯಕೋಮಿನವರು ಗಾಯಗೊಂಡಿದ್ದಾರೆ. ಬೈಕ್ ರೈಡರ್ಸ್ ಮತ್ತು ಆಟೋದವರ ನಡುವೆ ನಡೆದ ಮಾತಿನ ಚಕಮಕಿಯಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.
ಇನ್ನೊಂದು ಕೇಸ್ ನಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ದ್ರೌಪದಮ್ಮ ವೃತ್ತದಲ್ಲಿ ವಿಜಯಕುಮಾರ್ ಮತ್ತು ಗುರುಸಿದ್ದಪ್ಪ, ತಸ್ರು ನಡುವೆ ಗಲಾಟೆಯಾಗಿದೆ. ವಿಜಯಕುಮಾರ್ ಮೇಲೆ ಹರಿತವಾದ ಆಯುದ್ಧದಿಂದ ಚುಚ್ಚಲಾಗಿದೆ. ಕುರಿತು ಸಹ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.