ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾವಿ ವೈದ್ಯನೊಬ್ಬ ಹೈಟೆಕ್ ಆಗಿ ಗಾಂಜಾ (Cannabis) ಬೆಳೆದು ಪೊಲೀಸರ ಅತಿಥಿಯಾಗಿದ್ದಾನೆ.
ಮೂಲತಃ ತಮಿಳುನಾಡಿನ ಕೃಷ್ಣಗಿರಿಯ ವಿಘ್ನರಾಜ್(28), ಕೇರಳ ರಾಜ್ಯದ ಪುರಲೆ ನಿವಾಸಿ ವಿನೋದ್ ಕುಮಾರ್(27), ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯ ಕಡಗತ್ತೂರಿನ ಪಾಂಡಿದೊರೆ(27) ಎಂಬುವವರನ್ನು ಬಂಧಿಸಲಾಗಿದೆ.
READ | ಶಿವಮೊಗ್ಗದಲ್ಲಿ ಮಹಿಳೆ ಸೇರಿ ಇಬ್ಬರು ಹೊರ ಜಿಲ್ಲೆಯವರ ಬಂಧನ, ಕಾರಣವೇನು? ಅವರ ಬಳಿ ಹುಕ್ಕಾ ಕೊಳವೆಗಳು ಪತ್ತೆ!
ಮನೆಯಲ್ಲೇ ಬೆಳೆಯುತ್ತಿದ್ದ ಗಾಂಜಾ
ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, “ವಿಘ್ನರಾಜ್ ಪುರಲೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಕೃತಕ ಬೆಳಕು, ಉಷ್ಣಾಂಶ ಮತ್ತು ಗಾಳಿಯನ್ನು ಬಳಸಿ ಹೂದಾನಿಗಳಲ್ಲಿ ಗಾಂಜಾ ಬೆಳೆಯುತ್ತಿದ್ದ. ನಂತರ, ಅವುಗಳನ್ನು ಒಣಗಿಸಿ ಸಂಸ್ಕರಿಸಿ ಪ್ಯಾಕೆಟ್’ಗಳಿಗೆ ತುಂಬಿ ಮಾರಾಟ ಮಾಡುತ್ತಿದ್ದ” ಎಂದು ತಿಳಿಸಿದರು.
ಆರೋಪಿಗಳ ಬಳಿ ಸಿಕ್ಕಿದ್ದೇನು?
ಆರೋಪಿತರಿಂದ 227 ಗ್ರಾಂ ಒಣ ಗಾಂಜಾ ಅಂದಾಜು ₹5800 ಮೌಲ್ಯದ 1 ಕೆ.ಜಿ 530 ಗ್ರಾಂ ತೂಕದ ಹಸಿ ಗಾಂಜಾ, ಅಂದಾಜು ₹30,000, 10 ಗ್ರಾಂ ಚರಸ್ ಅಂದಾಜು ₹6,000 ಮೌಲ್ಯದ ಗಾಂಜಾ ಬೀಜಗಳಿದ್ದ 1 ಚಿಕ್ಕ ಬಾಟಲ್, 3 ಕೆನಾಬಿಸ್ ಆಯಿಲ್ ಸೀರಿಂಜ್ ರೀತಿಯ ವಸ್ತುಗಳು, 3 ಕಬ್ಬಿಣದ ರಾಡುಗಳ ಮೇಲೆ ಕಪ್ಪು, ಬಣ್ಣದ ಕವರ್ ಸುತ್ತಿದ ಸ್ಯಾಂಡ್ ಗಳು, ಗಾಂಜಾ ಪುಡಿ ಮಾಡಲು ಬಳಸುವ 2 ಡಬ್ಬಿಗಳು, 1 ಎಲೆಕ್ಟ್ರಾನಿಕ್ ತೂಕದ ಯಂತ್ರ, 1 EXIT ಫ್ರಾನ್, 6 ಟೇಬಲ್ ಫ್ಯಾನ್ ಗಳು, 2 ಸೆಸರ್ ಗಳು, 3 LED ಲೈಟ್ ರೋಲಿಂಗ್ ಪೇಪರ್, 2 ಹುಕ್ಕಾ ಕೊಳವೆ ಮತ್ತು 4 ಹುಕ್ಕಾ ಕಾಪ್ಗಳು, ಗಾಂಜಾ ಗಿಡದ ಕಾಂಡಗಳು, ಮತ್ತು ನಗದು ಹಣ ₹19,000 ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಯಾರೆಲ್ಲ ಗ್ರಾಹಕರು?
“ಈ ರೀತಿ ಮನೆಯಲ್ಲೇ ಬೆಳೆದ ಗಾಂಜಾವನ್ನು ವೈದ್ಯಕೀಯ ವಿದ್ಯಾರ್ಥಿಗಳು ಖರೀದಿಸುತ್ತಿದ್ದರು ಹಾಗೂ ಸ್ಥಳೀಯವಾಗಿ ಮಾತ್ರವಲ್ಲದೇ ತಮಿಳುನಾಡಿಗೂ ರವಾನೆ ಮಾಡಲಾಗುತ್ತಿತ್ತು” ಎಂದು ಎಸ್.ಪಿ ಹೇಳಿದರು.
READ | ಖಾಸಗಿ ವಿಡಿಯೋ ಎಡಿಟ್ ಮಾಡಿ ಮಾನಸಿಕ ಹಿಂಸೆ, ಆರೋಪಿ ವಿರುದ್ಧ ದಾಖಲಾಯ್ತು ಕೇಸ್
ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ತಂಡ
ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭುಮರಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ- ಬಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ.ಸುರೇಶ್ ಮೇಲ್ವಿಚಾರಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಅಭಯ್ ಪ್ರಕಾಶ್ ಸೋಮನಾಳ್, ಪೊಲೀಸ್ ಉಪ ನಿರೀಕ್ಷಕ ಟಿ.ರಮೇಶ್ ನೇತೃತ್ವದ ಸಿಬ್ಬಂದಿಯ ತಂಡವು ಕಾರ್ಯಾಚರಣೆ ನಡೆಸಿದೆ. ಕಾರ್ಯಕ್ಕೆ ಎಸ್.ಪಿ. ಪ್ರಶಂಸಿಸಿದ್ದಾರೆ.
Online Fraud | ಆನ್’ಲೈನ್ ಉದ್ಯೋಗ ನಂಬಿ ಎರಡನೇ ದಿನದಲ್ಲಿ 3.31 ಲಕ್ಷ ರೂ. ಕಳೆದುಕೊಂಡ ಯುವಕ!