SHIVAMOGGA: ಅಬ್ಬಲಗೆರೆ ಗ್ರಾಮದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಹುಣಸೋಡು ಗ್ರಾಮದ ಸೀತಾಬಾಯಿ(50) ಎಂಬಾಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
READ | ಒಂದೇ ಮಳೆಗೆ ಸುಸ್ತಾದ ಶಿವಮೊಗ್ಗ ನಗರ, ನೀರಲ್ಲಿ ಮುಳುಗಿದ ಬೈಕ್ಸ್, ಸೋರಿದ ರೈಲು ನಿಲ್ದಾಣ, ಎಲ್ಲಿ ಏನೇನಾಯ್ತು?
ಇತ್ತೀಚೆಗೆ ವಿಜಯನಗರದಲ್ಲಿ ನೀರಾವರಿ ಇಲಾಖೆ ಇಇಯ ಪತ್ನಿ ಕಮಲಮ್ಮ ಎಂಬುವವರ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಸೀತಾಬಾಯಿ ಅವರ ಪುತ್ರ ಹನುಮಂತ ನಾಯ್ಕ್ ಅವರ ಹೆಸರು ಕೇಳಿಬಂದಿತ್ತು. ಈ ಕುರಿತು ತನಿಖೆ ನಡೆಯುತ್ತಿದ್ದು, ಹನುಮಂತ ಅವರು ತಲೆಮರೆಸಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.